ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಡಿಎ 3 ಹೊಸ ಬಡಾವಣೆ ನಿರ್ಮಾಣಕ್ಕೆ ಸಂಪುಟ ಅಸ್ತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಡಿಎ 3 ಹೊಸ ಬಡಾವಣೆ ನಿರ್ಮಾಣಕ್ಕೆ ಸಂಪುಟ ಅಸ್ತು
ಬೆಂಗಳೂರಿನಲ್ಲಿ ವಸತಿ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಬಿಡಿಎ ನಿರ್ಮಿಸಲು ಹೊರಟಿರುವ 3 ಹೊಸ ಬಡಾವಣೆಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಶನಿವಾರ ಒಪ್ಪಿಗೆ ನೀಡಿದೆ.

ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಮತ್ತು ಗುಂಜೂರಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕೆ.ಸಿ.ರೆಡ್ಡಿ, ಡಿ.ದೇವರಾಜು ಅರಸು ಮತ್ತು ನಿಜಲಿಂಗಪ್ಪ ಅವರ ಹೆಸರಿನಲ್ಲಿ ಬಿಡಿಎ ಬೃಹತ್ ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು ಈ ಯೋಜನೆಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಸಭೆಯ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಕೆ.ಸಿ.ರೆಡ್ಡಿ ಬಡಾವಣೆಯನ್ನು 2134 ಎಕರೆ ವ್ಯಾಪ್ತಿಯಲ್ಲಿ, ಡಿ.ದೇವರಾಜು ಅರಸು ಬಡಾವಣೆಯನ್ನು 1976 ಎಕರೆ ಹಾಗೂ ನಿಜಲಿಂಗಪ್ಪ ಬಡಾವಣೆಯನ್ನು 2806 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಬಿಡಿಎ ಉದ್ದೇಶಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗುಂಪುಗಾರಿಕೆಗೆ ಇನ್ಮುಂದೆ ಅವಕಾಶವಿಲ್ಲ: ಗುಲಾಂ ನಬಿ
ದಾಳಿ ನಡೆಸುವುದು ಭಾರತೀಯ ಸಂಸ್ಕೃತಿಯಲ್ಲ: ಆಡ್ವಾಣಿ
ಸರಕಾರದಿಂದ ಲೋಕಾಯುಕ್ತರಿಗೆ 'ಅಂಕುಶ'
ಕಾಂಗ್ರೆಸ್‌‌ ವೋಟ್ ಬ್ಯಾಂಕ್ ರಾಜಕೀಯ ಮಾಡ್ತಿದೆ: ಆಡ್ವಾಣಿ
ಮೈಸೂರು ಪಾಲಿಕೆ: 8ಸದಸ್ಯರು 'ಕೈ' ಬಿಟ್ಟು ಬಿಜೆಪಿಗೆ
ರಾಜ್ಯದ್ದು ಮಕ್ಮಲ್ ಟೋಪಿ ಬಜೆಟ್: ಕುಮಾರಸ್ವಾಮಿ