ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಂಡಿನೊಂದಿಗೆ ಬರುವೆ-ತಾಕತ್ತಿದ್ದರೆ ತಡೆಯಿರಿ: ಮುತಾಲಿಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಂಡಿನೊಂದಿಗೆ ಬರುವೆ-ತಾಕತ್ತಿದ್ದರೆ ತಡೆಯಿರಿ: ಮುತಾಲಿಕ್
ಬಿಜೆಪಿ ಹಿಂದೂತ್ವ ಮರೆತು ಕಾರ್ಯನಿರ್ವಹಿಸುತ್ತಿದೆ...
NRB
ನಗರದ ಎಮ್ನೇಶಿಯ ಪಬ್ ಮೇಲೆ ದಾಳಿ ನಡೆಸಿದ ಪ್ರಕರಣದ ಕುರಿತಂತೆ ಶ್ರೀರಾಮಸೇನೆಯ ಇಬ್ಬರನ್ನು ಗಡಿಪಾರು ಮಾಡಿರುವ ಕ್ರಮದ ವಿರುದ್ಧ ಕಿಡಿಕಾರಿರುವ ಮುತಾಲಿಕ್ ಹತ್ತು ಸಾವಿರ ಕಾರ್ಯಕರ್ತರೊಂದಿಗೆ ಮಂಗಳೂರಿಗೆ ಆಗಮಿಸುತ್ತೇನೆ ತಾಕತ್ತಿದ್ದರೆ ತಡೆಯಿರಿ ಎಂದು ಜಿಲ್ಲಾಡಳಿತಕ್ಕೆ ಸವಾಲ್ ಹಾಕಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಿಂದೂತ್ವ ಮರೆತು ಕಾರ್ಯನಿರ್ವಹಿಸುತ್ತಿದೆ ಎಂದ ಅವರು, ಬಿಜೆಪಿ ಅಧಿಕಾರದ ಅಮಲಿನಲ್ಲಿ ರಾಜ್ಯಭಾರ ಮಾಡುತ್ತಿರುವುದಾಗಿ ಗಂಭೀರವಾಗಿ ಆರೋಪಿಸಿದರು. ಇದಕ್ಕೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪಬ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಸೇರಿದಂತೆ ಐದು ಮಂದಿಗೆ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿತ್ತು. ಆದರೆ ಮೂರು ಮಂದಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಏತನ್ಮಧ್ಯೆ ಜಿಲ್ಲಾಡಳಿತ ಉಳಿದಿಬ್ಬರನ್ನು ಗಡಿಪಾರು ಮಾಡಿತ್ತು.

ಜಿಲ್ಲಾಡಳಿತದ ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮಸೇನೆಯ ಸಂಸ್ಥಾಪಕ ಮುತಾಲಿಕ್, ನಗರಕ್ಕೆ ಹತ್ತು ಸಾವಿರ ಮಂದಿ ಕಾರ್ಯಕರ್ತರೊಂದಿಗೆ ಆಗಮಿಸುವುದಾಗಿ ಸವಾಲ್ ಹಾಕಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರವೇ ರೇಸ್ ಕೋರ್ಸ್ ಸ್ಥಳಾಂತರ: ಯಡಿಯೂರಪ್ಪ
ನೂತನ ಕೈಗಾರಿಕಾ ನೀತಿಗೆ ಸಂಪುಟ ಅಸ್ತು
ಅಮೃತ ಮಹೋತ್ಸವಕ್ಕೆ ಇಂದು ಚಾಲನೆ
ಆಜಾದ್ ಎದುರೇ ಕಾಂಗ್ರೆಸ್ಸಿಗರ ಹೊಯ್‌‌ಕೈ !
ಶಿರಾಡಿಘಾಟ್‌ಗೆ ಕಾಂಕ್ರಿಟ್ ರಸ್ತೆ: ಮುನಿಯಪ್ಪ
ಶಾಸಕ ಯೋಗೇಶ್ವರ್ ಬಿಜೆಪಿ ತೆಕ್ಕೆಗೆ ?