ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆಡ್ವಾಣಿಗೆ ಪ್ರಧಾನಿ ಯೋಗ್ಯತೆ ಇಲ್ಲ: ದೇಶಪಾಂಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿಗೆ ಪ್ರಧಾನಿ ಯೋಗ್ಯತೆ ಇಲ್ಲ: ದೇಶಪಾಂಡೆ
NRB
ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರಿಗೆ ಪ್ರಧಾನಿಯಾಗುವ ಅರ್ಹತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಟೀಕಿಸಿದ್ದಾರೆ.

ಆಡ್ವಾಣಿ ಅವರು ವಿವಾದಿತ ಮುಖ, ಎಲ್ಲರೂ ಒಪ್ಪುವಂತಹ ವ್ಯಕ್ತಿಯೂ ಅಲ್ಲ, ಹಾಗಾಗಿ ಅವರು ಪ್ರಧಾನಿ ಸ್ಥಾನಕ್ಕೆ ಅರ್ಹರಲ್ಲ ಎಂದು ಕುಹಕವಾಡಿದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಯುವ ದೀಕ್ಷೆ ರಾಜ್ಯ ಮಟ್ಟದ ಬ್ಲಾಕ್ ಹಾಗೂ ಜಿಲ್ಲಾಧ್ಯಕ್ಷರ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರು ದಕ್ಷರು, ಸಜ್ಜನರು, ಸೋನಿಯಾ ಗಾಂಧಿ ಮಾರ್ಗದರ್ಶನದಲ್ಲಿ ದೇಶವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದವರು ಎಂದು ಹೇಳಿದರು.

ಎನ್‌ಡಿಎ ಸರಕಾರ ಅಪವಾದಗಳಿಂದ ತುಂಬಿದ ಸರಕಾರವಾದರೆ, ಯುಪಿಎ ಸರಕಾರ ಅಪವಾದ ಮುಕ್ತ ಸರಕಾರವಾಗಿದೆ ಎಂದು ಹೇಳಿದ ಅವರು, ರಾಹುಲ್ ಗಾಂಧಿ ಅಂತಹ ಯುವ ನಾಯಕರು ಸಿಕ್ಕಿದ್ದು ಯುವ ಕಾಂಗ್ರೆಸ್ಸಿಗರ ಪುಣ್ಯ ಎಂದು ಬಣ್ಣಿಸಿದರು.

ಯುವಕರು ನಾಳಿನ ಭವಿಷ್ಯದ ರೂವಾರಿಗಳು, ಈಗಲೇ ಸಂಸತ್ ಸದಸ್ಯ ಸ್ಥಾನ ಬೇಕು ಎಂದು ಕೇಳಬಾರದು, ನಿಮಗೂ ಆಕಾಂಕ್ಷೆ ಇದೆ, ಹಂಬಲಗಳಿವೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಾಡಿಗೆ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಡಿಯೂರಪ್ಪ ಸರ್ವಜ್ಞ: ದೇವೇಗೌಡ ಟೀಕೆ
ನಿರ್ಮಲಾ ವೆಂಕಟೇಶ್ ಬಿಜೆಪಿ ಪಾಳಯಕ್ಕೆ
ಬಿಜೆಪಿಗೂ ತಲೆ ನೋವಾದ ಕುಟುಂಬ ರಾಜಕಾರಣ!
ಹಿಂದು ವೋಟ್ ಬ್ಯಾಂಕ್ ಸೃಷ್ಟಿ ಅಗತ್ಯ: ಪೇಜಾವರ ಶ್ರೀ
ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್: ಅಶೋಕ್
ರಾಜ್ಯದಲ್ಲಿ ಅನಿಯಮಿತ ಲೋಡ್‌‌ಶೆಡ್ಡಿಂಗ್ ಜಾರಿ