ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಿಮ್ಮನ್ನು ಯಾಕೆ ತಡಿಬಾರ್ದು: ಮುತಾಲಿಕ್‌‌ಗೆ ನೋಟಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿಮ್ಮನ್ನು ಯಾಕೆ ತಡಿಬಾರ್ದು: ಮುತಾಲಿಕ್‌‌ಗೆ ನೋಟಿಸ್
NRB
ಎಮ್ನೇಶಿಯ ಪಬ್ ದಾಳಿ ಪ್ರಕರಣದ ರಾದ್ಧಾಂತ ಇನ್ನೂ ಮುಂದುವರಿದಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಪ್ರವೇಶಿಸದಂತೆ ನಿಮ್ಮನ್ನು ಯಾಕೆ ತಡೆಯಬಾರದು ಎಂದು ವಿವರಣೆ ಕೇಳಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ಗೆ ಜಿಲ್ಲಾಡಳಿತ ಷೋಕಾಸ್ ನೋಟಿಸ್ ಜಾರಿ ಮಾಡಿದೆ.

ಪಬ್ ದಾಳಿಗೆ ಸಂಬಂಧಿಸಿದಂತೆ ಈ ಮೊದಲು ಜಿಲ್ಲಾಡಳಿತ ಶ್ರೀರಾಮಸೇನೆಯ ಐದು ಮಂದಿಗೆ ಗಡಿಪಾರು ಕುರಿತು ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿತ್ತು. ಆದರೆ ಮೂರು ಮಂದಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದು, ಉಳಿದ ಇಬ್ಬರನ್ನು ಜಿಲ್ಲಾಡಳಿತ ಗಡಿಪಾರು ಮಾಡಿತ್ತು.

ಈ ಕ್ರಮದ ನಂತರ ಮುತಾಲಿಕ್ ಅವರು ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಹತ್ತು ಸಾವಿರ ಮಂದಿಯೊಂದಿಗೆ ನಗರ ಪ್ರವೇಶಿಸುತ್ತೇನೆ, ತಾಕತ್ತಿದ್ದರೆ ನನ್ನನ್ನು ತಡೆಯಿರಿ ಎಂದು ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ದರು.

ಆ ನಿಟ್ಟಿನಲ್ಲಿ ದಕ್ಷಿಣ ಕನ್ನಡಕ್ಕೆ ಆಗಮಿಸುವ ನಿಮ್ಮನ್ನು ಯಾಕೆ ತಡೆಯಬಾರದು ಎಂದು ವಿವರಣೆ ಕೇಳಿ ಮುತಾಲಿಕ್‌ಗೆ ನೋಟಿಸ್ ಜಾರಿ ಮಾಡಿರುವುದಾಗಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದ್ದು, ನೋಟಿಸ್‌ಗೆ ಮಾ.12ರೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಡಿಯೂರಪ್ಪ-ಅನಂತ್ ಕುಮಾರ್ ನಡುವೆ ಜಟಾಪಟಿ
ಬುರ್ಖಾ ಧರಿಸಲು ಅಡ್ಡಿ ಸರಿಯಲ್ಲ: ಪ್ರೊ.ಮುಮ್ತಾಜ್
ಪಕ್ಷಕ್ಕೆ 'ಗ್ರೇಡ್‌‌' ಮತದಾರರು ನೀಡ್ತಾರೆ: ಕುಮಾರಸ್ವಾಮಿ
ತೇಜಸ್ವಿನಿ ಬಹಿರಂಗ ಹೇಳಿಕೆ ತಪ್ಪು: ದೇಶಪಾಂಡೆ
ಹಿಂದೆ-ಮುಂದೆ ನೋಡ್ಬೇಡಿ,ಕ್ರಮ ಕೈಗೊಳ್ಳಿ:ವಿದ್ಯಾಶಂಕರ್
ನೀತಿ ಸಂಹಿತೆ-ಬಿಜೆಪಿ ವಿರುದ್ಧ ದೂರು: ದೇಶಪಾಂಡೆ