ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರು ಸ್ಫೋಟ: ಸಿಮಿ ಉಗ್ರನ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು ಸ್ಫೋಟ: ಸಿಮಿ ಉಗ್ರನ ಬಂಧನ
ಬೆಂಗಳೂರಿನ ಕಲಾಸಿ ಪಾಳ್ಯದಲ್ಲಿ ಪೊಲೀಸರು ಸಿಮಿ ಉಗ್ರನೊಬ್ಬನನ್ನು ಬಂಧಿಸಿದ್ದು, ಈತ ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾನೆ. ಸರ್ಫರೋಜ್ ನವಾಜ್ ಎಂಬಾತ ಶನಿವಾರ ಬಂಧನಕ್ಕೀಡಾಗಿದ್ದಾನೆ. ಈತನನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದು ಮಾರ್ಚ್ 14ರವರೆಗೆ ಪೊಲೀಸರ ವಶಕ್ಕೊಪ್ಪಿಸಲಾಗಿದೆ.

ಸರ್ಫರೋಜ್ ನವಾಜ್ ಮೂಲತಃ ಕೇರಳದ ಎರ್ನಾಕುಲಂನವನು. ಈತ 2007ರಲ್ಲಿ ಬಾಂಗ್ಲಾ ಮೂಲಕ ಭಾರತ ಪ್ರವೇಶಿಸಿದ್ದ. ಲಷ್ಕರ್ ನಂತಹ ಉಗ್ರವಾದಿ ಸಂಘಟನೆಗಳ ಸಂಪರ್ಕವನ್ನು ಈತ ಹೊಂದಿದ್ದಾನೆ ಅಲ್ಲದೆ ಸಿಮಿ ಕಾರ್ಯನಾಗಿದ್ದಾನೆ.ಕೆಲ ಕಾಲ ಸಿಮಿ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದನೆನ್ನಲಾಗಿದೆ.

ಜುಲೈ 25, 2008ರಲ್ಲಿ ನಡೆದ ಬೆಂಗಳೂರು ಸ್ಫೋಟದಲ್ಲಿ ನವಾಜ್ ಭಾಗಿಯಾಗಿ, ಸ್ಫೋಟಕಗಳನ್ನು ಎಲ್ಲೆಲ್ಲಿ ಇಡಬೇಕು ಎಂಬುದನ್ನೂ ಈತನೇ ನಿರ್ಧರಿಸಿದ್ದ. ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ತರಬೇತಿ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನವಾಜ್ ಇನ್ನೂ ಯಾವ್ಯಾವ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚು.ಆಯೋಗಕ್ಕೆ ಮಾಹಿತಿ ನೀಡಿ, ಹಣ ಮಾಡಿ
ಗುಂಡು ಹಾರಾಟಕ್ಕೆ ಹೇತುವಾದ ಚುಡಾವಣೆ
ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ಕೊಡಬೇಕಿಲ್ಲ: ಸಿಎಂ
ಸ್ಫರ್ಧಿ ರಾಘು ಅಲ್ಲ, ಅಪ್ಪ ಯಡಿಯೂರಪ್ಪ: ಬಂಗಾರಪ್ಪ
ನಾನಲ್ಲ, ಭದ್ರತಾ ಸಭೆ ರದ್ದು ಮಾಡಿದ್ದು ಚಿದು: ಸಿಎಂ
ಬುರ್ಖಾ ವಿರುದ್ಧ ಹೇಳಿಕೆ: ಮುತಾಲಿಕ್ ಕ್ಷಮೆಗೆ ಆಗ್ರಹ