ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 22 ಸ್ಥಾನ ಗೆಲ್ಲುವುದು ಖಚಿತ: ಸಿಎಂ ಭರವಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
22 ಸ್ಥಾನ ಗೆಲ್ಲುವುದು ಖಚಿತ: ಸಿಎಂ ಭರವಸೆ
NRB
ಬಜೆಟ್ ಪ್ರಕಟಿತ ಹಾಗೂ ಈಗಾಗಲೇ ಸೂಚಿಸಿರುವ ಯೋಜನೆ, ಕಾಮಗಾರಿಗಳನ್ನು ಮೇ ತಿಂಗಳೊಳಗೆ ಆರಂಭಿಸಬೇಕೆಂದು ಈಗಾಗಲೇ ಅಧಿಕಾರಿಗಳೀಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಈ ಹಿಂದೆ ಬಜೆಟ್ನಲ್ಲಿ ಸೂಚಿತ ಯೋಜನೆಗಳಿಗೆ ಸೆಪ್ಟೆಂಬರ್, ಆಕ್ಟೋಬರ್ ತಿಂಗಳ ಬಳಿಕ ಚಾಲನೆ ನೀಡಲಾಗುತ್ತಿತ್ತು. ಈ ಬಾರಿ ತ್ವರಿತವಾಗಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಜನರು ಮೆಚ್ಚುವಂತಹ ಅಭಿವೃದ್ದಿಯಾಗಲಿದೆ ಎಂದರು.

ಈ ಹಿಂದಿನ ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳು ಕಾರಣ. ಬಿಜೆಪಿ ಕಳೆದ 9 ತಿಂಗಳಲ್ಲಿ ಮಾಡಿರುವ ಸಾಧನೆಗಳನ್ನು ನೋಡಿ ಜನರು ಮತ ಹಾಕುತ್ತಾರೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ 28ಕ್ಷೇತ್ರಗಳಲ್ಲಿ 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಉಳಿದ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಈ ಮೂಲಕ ಅಡ್ವಾಣಿಯವರನ್ನು ಪ್ರಧಾನಿ ಪಟ್ಟಕ್ಕೇರಿಸುವ ಪ್ರಯತ್ನಗಳಿಗೆ ನಮ್ಮ ಕಾರ್ಯಕರ್ತರು ಸಹಕರಿಸುತ್ತಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೃತೀಯರಂಗ ಸಮಾವೇಶ: ಬಸ್ಸು ರಾಜಕೀಯ
ಬಿಜೆಪಿ ನಡೆಗೆ 'ಸ್ವಾಭಿಮಾನಿ'ಗಳಿಂದ ಅಡೆ-ತಡೆ
ಪೊಲೀಸ್ ವೆಬ್‌ಸೈಟಲ್ಲಿ ಆಚಾರ್ಯ ಬ್ಲಾಗ್‌ಗೆ ನಿರ್ಬಂಧ
ಎಲ್ಲಾ ರೇವ್ ಪಾರ್ಟಿ ಆರೋಪಿಗಳಿಗೆ ಜಾಮೀನು
ತೃತೀಯ ರಂಗದ ಸಮಾವೇಶಕ್ಕೆ ಸಾಕಷ್ಟು ಬಸ್ಸಿಲ್ಲ?
ಬಂಗಾರಪ್ಪ ನಾಲಿಗೆಯನ್ನು ಕತ್ತರಿಸಿ: ಈಶ್ವರಪ್ಪ