ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಳ್ಳಾರಿಯಲ್ಲಿ ಮತಯಂತ್ರ ಬಳಸದಿರಲು ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಳ್ಳಾರಿಯಲ್ಲಿ ಮತಯಂತ್ರ ಬಳಸದಿರಲು ಒತ್ತಾಯ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಮತಯಂತ್ರದ ಬದಲಿಗೆ ಹಳೆಯ ಬ್ಯಾಲೆಟ್ ಪೇಪರನ್ನೇ ಬಳಸಬೇಕು ಎಂದು ಕಾಂಗ್ರೆಸ್ ಮುಖಂಡ ದಿವಾಕರ ಬಾಬು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಚುನಾವಣಾ ಮತಯಂತ್ರ ಬಳಸಿದರೆ ಅದರಲ್ಲಿ ಅಕ್ರಮ ಮತದಾನ ನಡೆಸಲು ಸಾಧ್ಯವಾಗುತ್ತದೆ ಎಂದು ದೂರಿರುವ ಬಾಬು, ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರಬರೆದಿರುವುದಾಗಿ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿರುವ ಅಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಗಳು ಎಂದು ಆರೋಪಿಸಿದ ಅವರು ಇಂತಹ ಅಕ್ರಮ ತಡೆಯಲು ಹಿಂದೆ ಜಾರಿಯಲ್ಲಿದ್ದ ಮತಪತ್ರವನ್ನೇ ಬಳಸಬೇಕು ಎಂದು ಒತ್ತಾಯಿಸಿದ್ದಾರೆ. ಮತಯಂತ್ರದಲ್ಲಿ ಬಟನ್ ಒತ್ತುವ ಮೂಲಕ ಇಂತಿಷ್ಟು ಶೇಕಡಾ ಮತದಾನ ಎಂದು ತೋರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮತಯಂತ್ರ, ದಿವಾಕರ ಬಾಬು, ಬಳ್ಳಾರಿ
ಮತ್ತಷ್ಟು
ಅನಂತ್ ಕುಮಾರ್‌ಗೂ ಸೀಟು ಹಂಚಿಕೆ ಹೊಣೆ
ಬಿಜೆಪಿ ಬಂಡಾಯ: ಸಿಎಂ ಸಂಧಾನ ಯಶಸ್ವಿ
ಎಡ, ಪ್ರಾದೇಶಿಕ ಪಕ್ಷಗಳಿಂದ 'ತೃತೀಯ ಶಕ್ತಿ'ಗೆ ಚಾಲನೆ
ವಿದ್ಯುತ್ ಸಮಸ್ಯೆಯಿಂದ ನೀರಿಗೆ ಅಭಾವ: ಶೋಭಾ
ತರಾತುರಿಯಲ್ಲಿ ದೀಪಬೆಳಗಿ ಉದ್ಘಾಟಿಸಿದ ಗೌಡರು
ಹಾವೇರಿ: ಮೆರವಣಿಗೆ ವಿವಾದ, ನಿಷೇದಾಜ್ಞೆ ಜಾರಿ