ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೈಸಿಕಲ್ ವಿತರಣೆಗೆ ನೀತಿ ಸಂಹಿತೆ ಅಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೈಸಿಕಲ್ ವಿತರಣೆಗೆ ನೀತಿ ಸಂಹಿತೆ ಅಡ್ಡಿ
ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಉಚಿತ ಬೈಸಿಕಲ್ ಹಂಚಿಕೆಯನ್ನು ಲೋಕಸಭಾ ಚುನಾವಣೆ ಮುಗಿಯುವವರೆಗೆ ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ಚುನಾವಣಾ ಆಯೋಗ ತಾಕೀತು ಮಾಡಿದೆ.

ದರ ಪರಿಷ್ಕರಣೆ ಹಾಗೂ ಇತರ ಕಾರಣದಿಂದ ವಿಳಂಬವಾಗಿದ್ದ ಬೈಸಿಕಲ್ ವಿತರಣೆಗೆ ಇದೀಗ ಚುನಾವಣೆ ಅಡ್ಡಿಯಾಗಿದೆ. ಬೈಸಿಕಲ್ ಹಂಚಿಕೆಯಿಂದ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದು ಆಯೋಗ ಸೂಚಿಸಿದ್ದು, ಮರು ಪರೀಶೀಲನೆಗೆ ಸರ್ಕಾರ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಬೈಸಿಕಲ್ ವಿತರಣೆ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿರುವ ಸುಳಿವು ನೀಡಿದ ಆಯೋಗ, ಸರ್ಕಾರಕ್ಕೆ ದಿಢೀರ್ ಸೂಚನೆ ನೀಡಿರುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಬಿಸಿತುಪ್ಪದಂತಾಗಿದೆ.

ನಾಲ್ಕು ಲಕ್ಷ ಬೈಸಿಕಲ್‌ಗಳ ಪೈಕಿ ಒಂದೂವರೆ ಲಕ್ಷ ಬೈಸಿಕಲ್‌ಗಳನ್ನು ಈಗಾಗಲೇ ವಿತರಿಸಲಾಗಿದೆ. ಗುತ್ತಿಗೆ ಪಡೆದ ಕಂಪೆನಿಗಳು ಉಳಿಕೆ ಬೈಸಿಕಲ್‌ಗಳನ್ನು ಸೂಚನೆ ನೀಡಿದ ಸ್ಥಳಗಳಿಗೆ ರವಾನಿಸಿ, ಜೋಡಣೆ ಮಾಡಿ ಹಂಚಿಕೆಗೆ ಸಿದ್ಧಗೊಳಿಸಿವೆ. ಆದರೆ ಇದೀಗ ವಿತರಣೆಗೆ ಅನುಮತಿ ಸಿಗುವ ತನಕ ಬೈಸಿಕಲ್‌ಗಳನ್ನು ಮಳೆ, ಬಿಸಿಲಿನಲ್ಲಿ ಕಾಯುವ ಸ್ಥಿತಿ ಎದುರಾಗಿದೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಪರ್ಧೆಗೆ ಅಪ್ಪನ ಬೆಂಬಲವಿರಲಿಲ್ಲ: ರಾಘವೇಂದ್ರ
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ
ಬಳ್ಳಾರಿಯಲ್ಲಿ ಮತಯಂತ್ರ ಬಳಸದಿರಲು ಒತ್ತಾಯ
ಅನಂತ್ ಕುಮಾರ್‌ಗೂ ಸೀಟು ಹಂಚಿಕೆ ಹೊಣೆ
ಬಿಜೆಪಿ ಬಂಡಾಯ: ಸಿಎಂ ಸಂಧಾನ ಯಶಸ್ವಿ
ಎಡ, ಪ್ರಾದೇಶಿಕ ಪಕ್ಷಗಳಿಂದ 'ತೃತೀಯ ಶಕ್ತಿ'ಗೆ ಚಾಲನೆ