ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಯಡಿಯೂರಪ್ಪಗೆ ಅನಂತ್ ಹೊಗಳಿಕೆಯ ಸುರಿಮಳೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಡಿಯೂರಪ್ಪಗೆ ಅನಂತ್ ಹೊಗಳಿಕೆಯ ಸುರಿಮಳೆ!
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಾಧನೆಯನ್ನು ಶ್ಲಾಘಿಸಿದ ಸಂಸದ ಅನಂತ್ ಕುಮಾರ್, ಈ ಸಾಧನೆಗಳ ಆಧಾರದ ಮೇಲೆಯೇ ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂಬುದನ್ನು ಹೊಗಳಿಕೆಯ ಮೂಲಕ ಹೇಳಿದ್ದಾರೆ.

ಅನಂತ್ ಕುಮಾರ್ ತಮ್ಮ ಭಾಷಣದುದ್ದಕ್ಕೂ ರಾಜ್ಯದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಹೊಗಳಿ, ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದರು.

ಕೇಂದ್ರದ ಯುಪಿಎ ಸರ್ಕಾರದ ವೈಫಲ್ಯಗಳನ್ನು ಒಂದೊಂದಾಗಿ ಸಭೆಯ ಮುಂದೆ ಇಟ್ಟ ಅವರು, ಹತ್ಯೆ, ಆತ್ಮಹತ್ಯೆ, ವಿಶ್ವಾಸದ್ರೋಹಗಳು ಯುಪಿಎ ಸರ್ಕಾರದ ಸಾಧನೆ ಎಂದು ಹೇಳಬಹುದು ಎಂದು ಟೀಕಿಸಿದರು.

ಎಲ್.ಕೆ.ಆಡ್ವಾಣಿ ಅವರನ್ನು ಪ್ರಧಾನಿಯಾಗಿಸುವ ಸಂಕಲ್ಪದಿಂದ ಚುನಾವಣೆಯಲ್ಲಿ 28ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭೆ: ಮಂಗಳೂರಿನಿಂದ ಪೂಜಾರಿ ಅಖಾಡಕ್ಕೆ
ಅಂಬರೀಶ್ ಅಸಮಾಧಾನ ಶಮನಕ್ಕೆ 'ತೇಜಸ್ವಿನಿ ಸಾರಥ್ಯ'
ಮುತಾಲಿಕ್ ಮಂಗ್ಳೂರ್ ಪ್ರವೇಶಕ್ಕೆ 1 ವರ್ಷ ನಿರ್ಬಂಧ
ಧ್ವಜ ಪುರಾಣ: ಎಂಇಎಸ್‌‌ಗೆ ಬೆಂಬಲ-ಸಚಿವ ಅಂಗಡಿ ಬಂಧನ
ಹೋಳಿ ರಂಪಾಟ: ಮುಂಡಗೋಡು ಬಂದ್
ತಾಕತ್ತಿದ್ದರೆ ಉಚ್ಛಾಟಿಸಲಿ: ಬಸವನ ಗೌಡ ಯತ್ನಾಳ್