ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಕ್ಸಲ್ ಪಡೆಯಿಂದ ಎಎನ್‌ಎಫ್ ಮೇಲೆ ಗ್ರೆನೇಡ್ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲ್ ಪಡೆಯಿಂದ ಎಎನ್‌ಎಫ್ ಮೇಲೆ ಗ್ರೆನೇಡ್ ದಾಳಿ
ಶೃಂಗೇರಿ ಸಮೀಪದ ಮಾತುವಳ್ಳಿ ಬಳಿ ಮಂಗಳವಾರ ಬೆಳಿಗ್ಗೆ ನಕ್ಸಲ್ ನಿಗ್ರಹ ಪಡೆಯ ಮೇಲೆ ನಕ್ಸಲ್ ತಂಡ ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಓರ್ವ ಪೇದೆ ಗಾಯಗೊಂಡಿರುವ ಘಟನೆ ನಡೆಯುವ ಮೂಲಕ ನಕ್ಸಲ್ ಅಟ್ಟಹಾಸ ಮತ್ತೆ ಮುಂದುವರಿದಂತಾಗಿದೆ.

ಮಲೆನಾಡಿನಲ್ಲಿ ಕಳೆದ ಕೆಲವು ತಿಂಗಳಿನಿಂದ ತಣ್ಣಗಾಗಿದ್ದ ನಕ್ಸಲೀಯರ ಅಟ್ಟಹಾಸ ಇದೀಗ ಮತ್ತೆ ಮುಂದುವರಿದಿದ್ದು, ಇಂದು ಬೆಳಿಗ್ಗೆ ಎಎನ್‌ಎಫ್ ಮೇಲೆ ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಪೇದೆ ತಾರೇಶ್ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 8ರಿಂದ 10 ಮಂದಿ ಇದ್ದ ನಕ್ಸಲೀಯರ ತಂಡ ಈ ಕೃತ್ಯ ಎಸಗಿದ್ದು, ಯಾವುದೇ ಪ್ರಾಣಾಪಾಯವಿಲ್ಲದೆ ಎಲ್ಲರೂ ಸುರಕ್ಷಿತವಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದು, ಗಾಯಗೊಂಡ ತಾರೇಶ್ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭೆ-26 ಕ್ಷೇತ್ರಗಳಲ್ಲಿ ಸ್ಪರ್ಧೆ: ದೇವೇಗೌಡ
ಕರ್ನಾಟಕದಲ್ಲಿ ಮುಸ್ಲಿಮರ ಸ್ಥಿತಿ ಚಿಂತಾಜನಕವಾಗಿದೆ: ಅನಂತಮೂರ್ತಿ
ಮುತಾಲಿಕ್ ಪ್ರವೇಶ ನಿರ್ಬಂಧದ ಹಿಂದೆ ಡಿವಿ ಕೈವಾಡ?
ಬಿಜೆಪಿ ಬ್ಲ್ಯಾಕ್‌‌ಮೇಲ್ ರಾಜಕೀಯ ಮಾಡ್ತಿದೆ: ಡಿಕೆಶಿ
ಬೆಂಗಳೂರು: 13 ಸುಪಾರಿ ಹಂತಕರ ಬಂಧನ
ಯಡಿಯೂರಪ್ಪಗೆ ಅನಂತ್ ಹೊಗಳಿಕೆಯ ಸುರಿಮಳೆ!