ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅನಂತ್ ವಿರುದ್ಧ ಮುನಿಸು-ಯಡಿಯೂರಪ್ಪ ಸಭೆಗೆ ಗೈರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅನಂತ್ ವಿರುದ್ಧ ಮುನಿಸು-ಯಡಿಯೂರಪ್ಪ ಸಭೆಗೆ ಗೈರು
ಕಾಂಗ್ರೆಸ್‌‍ನಲ್ಲಿ ಒಳಜಗಳ ಎಂಬುದಾಗಿ ಸದಾ ದೂರುತ್ತಿದ್ದ ಬಿಜೆಪಿಯಲ್ಲೂ ಅದೇ ಸಂಪ್ರದಾಯ ಮುಂದುವರಿದಿದ್ದು,ಒಂದೆಡೆ ಪಕ್ಷದ ಪ್ರಮುಖ ಮುಖಂಡರಾದ ಅರುಣ್ ಜೈಟ್ಲಿ ಮತ್ತು ರಾಜನಾಥ್ ಸಿಂಗ್ ನಡುವೆ ಜಟಾಪಟಿ ನಡೆಯುತ್ತಿದ್ದರೆ, ಮತ್ತೊಂದೆಡೆ ಅನಂತ್ ಕುಮಾರ್ ಮೇಲಿನ ಮುನಿಸಿನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ.

ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮಂಗಳವಾರ ದೆಹಲಿಯಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆಗಾಗಿ ನಡೆದ ಸಭೆಗೆ ಜೈಟ್ಲಿ ಗೈರು ಹಾಜರಾಗಿದ್ದಾರೆ. ಈ ಸಭೆಯಲ್ಲಿ ಹಿರಿಯ ಮುಖಂಡರಾದ ಎಲ್.ಕೆ.ಆಡ್ವಾಣಿ, ವೆಂಕಯ್ಯ ನಾಯ್ಡು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಜರಿದ್ದರು.

ಸಂಸದ ಅನಂತ್ ಕುಮಾರ್ ಸೋಮವಾರವಷ್ಟೇ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಹಾಡಿ ಹೊಗಳಿ ತೇಪೆ ಹಚ್ಚಿದ್ದರು. ಆದರೂ ಕೂಡ ಇಬ್ಬರ ನಡುವಿನ ಕೋಳಿ ಜಗಳ ಇದೀಗ ಬಹಿರಂಗಗೊಂಡಿದ್ದು, ಇಂದು ನಡೆದ ಸಭೆಯಲ್ಲಿ ಸ್ವತಃ ಯಡಿಯೂರಪ್ಪನವರೇ ಗೈರು ಹಾಜರಾಗುವ ಮೂಲಕ ಬಿಜೆಪಿಯಲ್ಲಿನ ರಂಪಾಟ ಜಗಜ್ಜಾಹೀರಾಗತೊಡಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾ.23: ಸೋನಿಯಾ ಪ್ರಚಾರ ದಾವಣಗೆರೆಯಿಂದ ಆರಂಭ
ಗೌಡರು ಮತ್ತೆ ಪ್ರಧಾನಿ ಆಗೋ ಕನಸಲ್ಲಿದ್ದಾರೆ: ಸಿದ್ದು
ಬಿಜೆಪಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಹಿಂದೇಟು: ಸಿಎಂ
ಕನ್ನಡ ದ್ರೋಹಿ ಸುರೇಶ್ ಅಂಗಡಿ ಉಚ್ಚಾಟನೆಗೆ ಕರವೇ ಆಗ್ರಹ
ನಕ್ಸಲ್ ಪಡೆಯಿಂದ ಎಎನ್‌ಎಫ್ ಮೇಲೆ ಗ್ರೆನೇಡ್ ದಾಳಿ
ಲೋಕಸಭೆ-26 ಕ್ಷೇತ್ರಗಳಲ್ಲಿ ಸ್ಪರ್ಧೆ: ದೇವೇಗೌಡ