ಈ ಬಾರಿಯ ಮೈಸೂರು ಲೋಕಸಭಾ ಚುನಾವಣೆಯಲ್ಲಿ ಹಣ, ಹೆಂಡ ಹಂಚದೆ ಗೆಲ್ಲುವುದಾಗಿ ಮಾಜಿ ಸಚಿವ ಹಾಗೂ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್. ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಮೂರು ಅಂಶದ ಹಂತಗಳನ್ನು ಹಾಕಿ ಕೊಂಡಿದ್ದು, ಈ ಮೂಲಕ ದಿಗ್ವಿಜಯ ಸಾಧಿಸುವ ಭರವಸೆ ತಮಗಿರುವುದಾಗಿ ದೃಢವಾಗಿ ನುಡಿದರು.
ಭ್ರಷ್ಟಾಚಾರ, ಕೋಮುವಾದ ನಂಬಿಕೆಯಿಲ್ಲದ ಸರ್ಕಾರ ಈ ಮೂರು ಬಿಜೆಪಿಯ ದೌರ್ಬಲ್ಯಗಳಾಗಿದ್ದು ಇದನ್ನೇ ಜನರ ಬಳಿ ಒಯ್ಯುವ ಮೂಲಕಚುನಾವಣೆಯನ್ನು ರೂಪಿಸುವುದಾಗಿ ತಿಳಿಸಿದರು.
ವಿಧಾನ ಸಭಾ ಚುನಾವಣೆಯ ಹಣ, ಹೆಂಡ ಹಂಚಿ ಗೆಲ್ಲುವ ಪ್ರವೃತ್ತಿಗೆ ತಿಲಾಂಜಲಿ ನೀಡುವುದರೊಂದಿಗೆ ಆಪರೇಷನ್ ಕಮಲಕ್ಕೆ ಪ್ರಾಶಸ್ತ್ಯ ನೀಡಿರುವ ಬಿಜೆಪಿಗೆ ತಿರುಗೇಟು ನೀಡಲು ಸಿದ್ಧವಿರುವುದಾಗಿ ಹೇಳಿದರು. |