ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಣ-ಹೆಂಡ ಹಂಚದೆ ಗೆಲುವು ಸಾಧಿಸುತ್ತೇನೆ: ವಿಶ್ವನಾಥ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣ-ಹೆಂಡ ಹಂಚದೆ ಗೆಲುವು ಸಾಧಿಸುತ್ತೇನೆ: ವಿಶ್ವನಾಥ್
ಈ ಬಾರಿಯ ಮೈಸೂರು ಲೋಕಸಭಾ ಚುನಾವಣೆಯಲ್ಲಿ ಹಣ, ಹೆಂಡ ಹಂಚದೆ ಗೆಲ್ಲುವುದಾಗಿ ಮಾಜಿ ಸಚಿವ ಹಾಗೂ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್. ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಮೂರು ಅಂಶದ ಹಂತಗಳನ್ನು ಹಾಕಿ ಕೊಂಡಿದ್ದು, ಈ ಮೂಲಕ ದಿಗ್ವಿಜಯ ಸಾಧಿಸುವ ಭರವಸೆ ತಮಗಿರುವುದಾಗಿ ದೃಢವಾಗಿ ನುಡಿದರು.

ಭ್ರಷ್ಟಾಚಾರ, ಕೋಮುವಾದ ನಂಬಿಕೆಯಿಲ್ಲದ ಸರ್ಕಾರ ಈ ಮೂರು ಬಿಜೆಪಿಯ ದೌರ್ಬಲ್ಯಗಳಾಗಿದ್ದು ಇದನ್ನೇ ಜನರ ಬಳಿ ಒಯ್ಯುವ ಮೂಲಕಚುನಾವಣೆಯನ್ನು ರೂಪಿಸುವುದಾಗಿ ತಿಳಿಸಿದರು.

ವಿಧಾನ ಸಭಾ ಚುನಾವಣೆಯ ಹಣ, ಹೆಂಡ ಹಂಚಿ ಗೆಲ್ಲುವ ಪ್ರವೃತ್ತಿಗೆ ತಿಲಾಂಜಲಿ ನೀಡುವುದರೊಂದಿಗೆ ಆಪರೇಷನ್ ಕಮಲಕ್ಕೆ ಪ್ರಾಶಸ್ತ್ಯ ನೀಡಿರುವ ಬಿಜೆಪಿಗೆ ತಿರುಗೇಟು ನೀಡಲು ಸಿದ್ಧವಿರುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೀಡ್ ಇಂಡಿಯಾ ಖ್ಯಾತಿಯ ಮಿಶ್ರಾ ಬಿಜೆಪಿಗೆ
ನಿಮ್ಮಲ್ಲಿ ಪಿಸ್ತೂಲ್ ಇದ್ರೆ ಗುಂಡು ಹಾರಿಸಿ !: ಬಿದರಿ
ಬಂಗಾರಪ್ಪ ವಿರುದ್ಧ ಯಡಿಯೂರಪ್ಪ ಬ್ಲ್ಯಾಕ್‌ಮೇಲ್: ಎಚ್‌ಡಿಕೆ
ಬಂಗಾರಪ್ಪ ನಾಲಿಗೆಗೆ ಕಾಂಗ್ರೆಸ್ ಬ್ರೇಕ್ ಹಾಕಲಿ: ಈಶ್ವರಪ್ಪ
ಬಿಜೆಪಿಯಿಂದ 'ಸಾಲದ ರಾಜಕಾರಣ': ಖರ್ಗೆ
ನಾನು ಪಕ್ಷಾತೀತ ವ್ಯಕ್ತಿ: ಪೇಜಾವರಶ್ರೀ