ಬೀದರ್: ಚುನಾವಣಾ ಅಧಿಕಾರಿಗೆ ಜೀವಬೆದರಿಕೆ ಹಾಕಿರುವ ಕಾರಣಕ್ಕೆ ಬಂಧನಕ್ಕೀಡಾದ ಬಿಜೆಪಿ ಅಭ್ಯರ್ಥಿ ಗುರುಪಾದಪ್ಪ ನಾಗಮಾರಪಲ್ಲಿ ಅವರನ್ನು ಬಂಧನಕ್ಕೀಡುಮಾಡಲಾಗಿದೆ. ಬಳಿಕ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಯಿತು.
ಮಾರ್ಚ್ 15ರಂದು ನಾಗಮಾರಪಲ್ಲಿ ಅವರು ಸಂತೋಷಕೂಟ ಆಯೋಜಿಸಿದ್ದ ವೇಳೆ ಪರಿಶೀಲನೆಗೆ ತೆರಳಿದ್ದ ತಹಶೀಲ್ದಾರ್ ಶರಣಪ್ಪ ಎಂಬವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ಈ ಕುರಿತು ಅವರಿಗೆ ನೋಟೀಸು ಜಾರಿ ಮಾಡಿ ಕಾರಣ ಕೇಳಿತ್ತು.
ಕೇಂದ್ರ ಚುನಾವಣಾ ಆಯೋಗದ ಆದೇಶದ ಮೇಲೆ ಭಾನುವಾರ ಅವರನ್ನು ಬಂಧಿಸಲಾಗಿದ್ದರೂ ಅವರು ತಕ್ಷಣವೇ ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ. |