ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಗಿಳಿಯುವೆ: ಎಸ್.ಎಂ.ಕೃಷ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಗಿಳಿಯುವೆ: ಎಸ್.ಎಂ.ಕೃಷ್ಣ
ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಚುನಾವಣಾ ಕಣಕ್ಕಿಳಿಯಲು ಸಿದ್ಧನಿದ್ದೇನೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಅಲ್ಲದೆ ಚುನಾವಣೆಗೆ ಸ್ಪರ್ಧಿಸಲು ತಾವು ಹಿಂದೇಟು ಹಾಕುತ್ತಿಲ್ಲ ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದರು.

ರಾಜ್ಯಸಭಾ ಸದಸ್ಯತ್ವದ ಅವಧಿ ಇನ್ನೂ ಐದೂವರೆ ವರ್ಷ ಇರುವುದರಿಂದ ತಮ್ಮನ್ನು ಕಣಕ್ಕಿಳಿಸಲು ಹೈಕಮಾಂಡ್ ಗೊಂದಲದಲ್ಲಿ ಇದೆ. ಮಂಗಳವಾರ ಅಥವಾ ಬುಧವಾರ ಪಕ್ಷದ ಸ್ಪಷ್ಟ ತೀರ್ಮಾನ ಹೊರಬೀಳಲಿದೆ ಎಂದು ಹೇಳಿದರು.

ತಾವು ಜನರ ಮುಂದೆ ಹೋಗಬೇಕೆಂದು ತೀರ್ಮಾನಿಸಿದ್ದೇನೆ. ಚುನಾವಣೆ ಸ್ಪರ್ಧೆ ಸಂಬಂಧ ಎಲ್ಲವೂ ಪಾರದರ್ಶಕವಾಗಿದ್ದು ಇದರಲ್ಲಿ ಗೊಂದಲದ ಮಾತೇ ಇಲ್ಲ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುತಾಲಿಕ್ ನಿಷೇಧದ ವಿರುದ್ಧ ಹೋರಾಟ: ವಸಂತ್
ಹಾಸನದಿಂದ ಅಖಾಡಕ್ಕಿಳಿಯುತ್ತೇನೆ: ಅಶೋಕ್ ಖೇಣಿ
ಬೀದರ್ ಅಭ್ಯರ್ಥಿ ನಾಗಮಾರಪಲ್ಲಿ ಬಂಧನ, ಬಿಡುಗಡೆ
ಬಂಗಾರಪ್ಪರಿಗೆ ನೀತಿ ಸಂಹಿತೆ ಉಲ್ಲಂಘನೆ ನೋಟೀಸು
ಪುಟಗೋಸಿ ಸ್ಥಾನಕ್ಕೆ ಸಿದ್ದು ಬ್ಲಾಕ್ಮೇಲ್: ಎಚ್ಡಿಕೆ ಲೇವಡಿ
ಅಂತಾರಾಜ್ಯ ಕಳ್ಳರ ಬಂಧನ, ಚಿನ್ನಭರಣ ವಶ