ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮತ್ತೆ ಡಿ.ಕೆ.ಶಿವಕುಮಾರ್ - ತೇಜಸ್ವಿನಿ ಜಟಾಪಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತೆ ಡಿ.ಕೆ.ಶಿವಕುಮಾರ್ - ತೇಜಸ್ವಿನಿ ಜಟಾಪಟಿ
NRB
ಸಂಸದೆ ತೇಜಸ್ವಿನಿ ಗೌಡ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಡುವಿನ ಜಟಾಪಟಿ ಮತ್ತೆ ಮುಂದುವರಿದಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಇಬ್ಬರು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಹೈಕಮಾಂಡ್ ತನಗೆ ಆದೇಶ ನೀಡಿದ ಎಂದು ತೇಜಸ್ವಿನಿ ಹೇಳುತ್ತಿದ್ದರೆ, ತಾನು ಕೂಡ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವುದಾಗಿ ಡಿಕೆಶಿ ಹೇಳುವ ಮೂಲಕ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದಾರೆ.

ಹೈಕಮಾಂಡ್ ಆದೇಶವನ್ನು ಡಿ.ಕೆ.ಶಿವಕುಮಾರ್ ತಿರುಚುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ತೇಜಸ್ವಿ ಗಂಭೀರವಾಗಿ ಆರೋಪಿಸಿದ್ದಾರೆ.

NRB
ಶಿವಕುಮಾರ್ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. ಹಿರಿಯ ಮುಖಂಡ ಜಾಫರ್ ಷರೀಫ್ ಹೆಸರನ್ನು ಅನಗತ್ಯವಾಗಿ ಪ್ರಸ್ತಾಪ ಮಾಡುತ್ತಿರುವುದು ಸರಿಯಲ್ಲ. ನಾನು ಅವರೊಂದಿಗೂ ಮಾತನಾಡಿದ್ದೇನೆ. ನನಗೆ ಷರೀಫ್ ಅವರ ಬೆಂಬಲವೂ ಇದೆ. ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವ ವಿಶ್ವಾಸ ತಮಗೆ ಇರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಬಿಜೆಪಿ ನಡೆಸುತ್ತಿರುವ ಆಪರೇಶನ್ ಕಮಲದ ಹಿಂದೆ ಡಿಕೆಶಿ ಅವರ ನೇರ ಕೈವಾಡ ಇದೆ ಎಂಬ ಹೇಳಿಕೆ ಮೂಲಕ ತೇಜಸ್ವಿನಿ ವಿವಾದ ಹುಟ್ಟುಹಾಕಿದ್ದರು. ಬಳಿಕ ಪಕ್ಷದ ವರಿಷ್ಠರ ಕೆಂಗಣ್ಣಿಗೂ ಗುರಿಯಾಗಿದ್ದರು. ಅಲ್ಲದೇ ತೇಜಸ್ವಿನಿ ಹಾಗೂ ಅಂಬರೀಶ್ ಪಕ್ಷದ ಪ್ರಶ್ನಾತೀತ ನಾಯಕರು ಎಂಬುದಾಗಿಯೂ ಲೇವಡಿ ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಗಿಳಿಯುವೆ: ಎಸ್.ಎಂ.ಕೃಷ್ಣ
ಮುತಾಲಿಕ್ ನಿಷೇಧದ ವಿರುದ್ಧ ಹೋರಾಟ: ವಸಂತ್
ಹಾಸನದಿಂದ ಅಖಾಡಕ್ಕಿಳಿಯುತ್ತೇನೆ: ಅಶೋಕ್ ಖೇಣಿ
ಬೀದರ್ ಅಭ್ಯರ್ಥಿ ನಾಗಮಾರಪಲ್ಲಿ ಬಂಧನ, ಬಿಡುಗಡೆ
ಬಂಗಾರಪ್ಪರಿಗೆ ನೀತಿ ಸಂಹಿತೆ ಉಲ್ಲಂಘನೆ ನೋಟೀಸು
ಪುಟಗೋಸಿ ಸ್ಥಾನಕ್ಕೆ ಸಿದ್ದು ಬ್ಲಾಕ್ಮೇಲ್: ಎಚ್ಡಿಕೆ ಲೇವಡಿ