ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಯಡಿಯೂರಪ್ಪ ಸಾಧನೆ ನಮಗೆ ಶ್ರೀರಕ್ಷೆ: ಶೋಭಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಡಿಯೂರಪ್ಪ ಸಾಧನೆ ನಮಗೆ ಶ್ರೀರಕ್ಷೆ: ಶೋಭಾ
ವಾಜಪೇಯಿ ಮತ್ತು ಯಡಿಯೂರಪ್ಪ ನೇತೃತ್ವದ ಸರಕಾರಗಳ ಸಾಧನೆಗಳು ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಜಪೇಯಿಯವರು ನೀಡಿದ ಗ್ರಾಮೀಣ ರಸ್ತೆ, ಕುಡಿಯುವ ನೀರು, ಮಧ್ಯಾಹ್ನದ ಬಿಸಿಯೂಟ, ಚತುಷ್ಪಥ ರಸ್ತೆ, ಗಂಗಾ ಕಾವೇರಿ ಇನ್ನು ಹಲವಾರು ಸಾಧನೆಗಳು ಮತ್ತು ಯಡಿಯೂರಪ್ಪ ನೀಡಿದ ವೃದ್ದಾಪ್ಯ, ಅಂಗವಿಕಲರ ವೇತನ, ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಾಗೂ 60 ವರ್ಷ ಆಳಿದ ಯುಪಿಎ ಸರ್ಕಾರದ ಶೂನ್ಯ ಕಾರ್ಯಕ್ರಮಗಳನ್ನಿಟ್ಟುಕೊಂಡು ಚುನಾವಣೆ ಎದುರಿಸಲಿದ್ದೇವೆ ಎಂದರು.

ಬೆಲೆ ಏರಿಕೆಯಿಂದ ಬಡ ಜನರು ತತ್ತರಿಸಿದ್ದಾರೆ. ಆದರೆ ಯುಪಿಎ ಸರ್ಕಾರ ಬೆಲೆ ಏರಿಕೆ ತಡೆಗಟ್ಟಲು ವಿಫಲವಾಗಿದೆ ಎಂದು ಆರೋಪಿಸಿದರು. ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಶಿವರಾಮೇಗೌಡ ಗೆಲುವಿನೊಂದಿಗೆ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ 22ರಿಂದ 23 ಸ್ಥಾನ ಗೆಲುವುದು ಖಚಿತ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೋನಿಯಾ ಮಹಾನ್ ಮಹಿಳೆ: ದೇಶಪಾಂಡೆ
ಮತ್ತೆ ಡಿ.ಕೆ.ಶಿವಕುಮಾರ್ - ತೇಜಸ್ವಿನಿ ಜಟಾಪಟಿ
ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಗಿಳಿಯುವೆ: ಎಸ್.ಎಂ.ಕೃಷ್ಣ
ಮುತಾಲಿಕ್ ನಿಷೇಧದ ವಿರುದ್ಧ ಹೋರಾಟ: ವಸಂತ್
ಹಾಸನದಿಂದ ಅಖಾಡಕ್ಕಿಳಿಯುತ್ತೇನೆ: ಅಶೋಕ್ ಖೇಣಿ
ಬೀದರ್ ಅಭ್ಯರ್ಥಿ ನಾಗಮಾರಪಲ್ಲಿ ಬಂಧನ, ಬಿಡುಗಡೆ