ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಿಂದೂ ಸಮಾಜೋತ್ಸವ ತಡೆಯಲು ಸಾಧ್ಯವಿಲ್ಲ: ರವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಂದೂ ಸಮಾಜೋತ್ಸವ ತಡೆಯಲು ಸಾಧ್ಯವಿಲ್ಲ: ರವಿ
ರಾಜ್ಯದಲ್ಲಿ ನಡೆಯುವ ಹಿಂದೂ ಸಮಾಜೋತ್ಸವವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ.ರವಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ರಾಜಧಾನಿಗೆ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮಾತುಕತೆ ನಡೆಸಿ, ಬಿಜೆಪಿ ನಡೆಸುತ್ತಿರುವ ಹಿಂದೂ ಸಮಾಜೋತ್ಸವಕ್ಕೆ ಅವಕಾಶ ನೀಡಬಾರದೆಂದು ಮನವಿ ಸಲ್ಲಿಸಿದ್ದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಮನವಿಗೆ ಕಿಡಿಕಾರಿರುವ ರವಿ, ಹಿಂದೂ ಸಮಾಜೋತ್ಸವ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ದಾರಿಯಲ್ಲಿ ಆನೆ ನಡೆದು ಹೋಗುತ್ತಿರುವಾಗ ನಾಯಿ ಬೊಗಳುವುದು ಸಾಮಾನ್ಯ ಅದಕ್ಕೆ ಏನು ಮಾಡಲಾಗುವುದಿಲ್ಲ ಎಂದು ಲೇವಡಿ ಮಾಡಿದರು.

ಹಿಂದೂ ಸಮಾಜೋತ್ಸವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಹಿಂದೂ ಸಂಪ್ರದಾಯವನ್ನು ಎತ್ತಿ ಹಿಡಿಯುವುದು ಹಾಗೂ ಜನಸಾಮಾನ್ಯರಲ್ಲಿ ಜನಜಾಗೃತಿ ಉಂಟು ಮಾಡುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.

ಹಿಂದೂ ಸಮಾಜೋತ್ಸವದಿಂದ ಕೋಮುದಳ್ಳುರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ದೂರು ಕೊಡುವವರು ಕೊಡುತ್ತಾರೆ, ಅದಕ್ಕೆ ನಾವೇನೂ ಮಾಡುವಂತಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯವನ್ನು ಬಿಜೆಪಿ ಅರಾಜಕತೆಯತ್ತ ದೂಡಿದೆ: ಉಗ್ರಪ್ಪ
ಕಾಂಗ್ರೆಸ್ ಜತೆ ಒಳ ಒಪ್ಪಂದ ಇಲ್ಲ: ಗೌಡ
ಪ್ರಧಾನಿಯಾಗಿದ್ದು ಈಶ್ವರನ ಲೀಲೆ: ದೇವೇಗೌಡ
ಉಲ್ಟಾ ಹೊಡೆದ ಎಸ್.ಎಂ.ಕೃಷ್ಣ-ಲೋಕಸಭೆಗೆ ಸ್ಪರ್ಧಿಸಲಾರೆ
ಬಿಜೆಪಿಯವರೆಲ್ಲ ಚಿರಯೌವನಿಗರೇ?: ವಿ.ಎಸ್.ಉಗ್ರಪ್ಪ
ಮುಸ್ಲಿಮರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ: ಯಡಿಯೂರಪ್ಪ