ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆಚಾರ್ಯಗೆ ಮುಜರಾಯಿ ಇಲಾಖೆ ಸೂಕ್ತ: ಸಿದ್ದರಾಮಯ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಚಾರ್ಯಗೆ ಮುಜರಾಯಿ ಇಲಾಖೆ ಸೂಕ್ತ: ಸಿದ್ದರಾಮಯ್ಯ
ಗೃಹ ಇಲಾಖೆಗೆ ವಿ.ಎಸ್.ಆಚಾರ್ಯ ತಕ್ಕ ಮಂತ್ರಿ ಅಲ್ಲ, ಅವರಿಗೆ ಮುಜರಾಯಿ ಇಲಾಖೆಯೇ ಸೂಕ್ತ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕಟುವಾಗಿ ಲೇವಡಿ ಮಾಡಿದ್ದಾರೆ.

ಅವರು ಬುಧವಾರ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ನಿರ್ಮಾಣ್ ಬೃಹತ್ ಸಮಾವೇಶದಲ್ಲಿ ಮಾತನಾಡುತ್ತ, ಸ್ವತಃ ಗೃಹ ಮಂತ್ರಿಗಳ ಜಿಲ್ಲೆಯಲ್ಲೇ ಚರ್ಚ್‌ಗಳನ್ನು ಧ್ವಂಸ ಮಾಡಲಾಯಿತು. ಆದರೂ ಕೂಡ ಬಿಜೆಪಿ ಸಂಸ್ಕೃತಿ, ಧಾರ್ಮಿಕತೆ ಹೆಸರಲ್ಲಿ ಪರೋಕ್ಷವಾಗಿ ರಾಜ್ಯವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಮಾತಿನುದ್ದಕ್ಕೂ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕೊಟ್ಟ ಭರವಸೆಗಳನ್ನು ಈಡೇರಿಸದೆ ಜನರ ಹಾದಿ ತಪ್ಪಿಸುವ ಕೆಲಸದಲ್ಲಿ ರಾಜ್ಯ ಸರ್ಕಾರ ನಿರತವಾಗಿದೆ. ಯಾವುದೇ ಅಭಿವೃದ್ದಿ ರಾಜಕಾರಣ ಮಾಡದೇ ಕೇವಲ ಸುಳ್ಳು ಭರವಸೆಗಳನ್ನು ನೀಡುವ ಮೂಲಕವೇ ಜನರಿಗೆ ಮಂಕುಬೂದಿ ಎರಚುತ್ತಿರುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೀತಿ ಸಂಹಿತೆ ಉಲ್ಲಂಘಿಸಿಲ್ಲ: ಯಡಿಯೂರಪ್ಪ
ಗದಗ್‌ನಲ್ಲಿ 76ನೇ ಕನ್ನಡ ಸಾಹಿತ್ಯ ಸಮ್ಮೇಳನ
ಹಿಂದೂ ಸಮಾಜೋತ್ಸವ ತಡೆಯಲು ಸಾಧ್ಯವಿಲ್ಲ: ರವಿ
ರಾಜ್ಯವನ್ನು ಬಿಜೆಪಿ ಅರಾಜಕತೆಯತ್ತ ದೂಡಿದೆ: ಉಗ್ರಪ್ಪ
ಕಾಂಗ್ರೆಸ್ ಜತೆ ಒಳ ಒಪ್ಪಂದ ಇಲ್ಲ: ಗೌಡ
ಪ್ರಧಾನಿಯಾಗಿದ್ದು ಈಶ್ವರನ ಲೀಲೆ: ದೇವೇಗೌಡ