ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಾಯೋದ್ರೊಳಗೆ ಜೆಡಿಎಸ್ ಮತ್ತೆ ಅಧಿಕಾರಕ್ಕೆ: ದೇವೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಯೋದ್ರೊಳಗೆ ಜೆಡಿಎಸ್ ಮತ್ತೆ ಅಧಿಕಾರಕ್ಕೆ: ದೇವೇಗೌಡ
PTI
"ನನ್ನ ಕೊನೆಯ ಉಸಿರು ಇರುವವರೆಗೆ ಜೆಡಿಎಸ್ ಅನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತಂದೇ ತರುತ್ತೇನೆ" ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶಪಥ ಮಾಡಿದ್ದಾರೆ.

ಬುಧವಾರ ಗುಲ್ಬರ್ಗಾದಲ್ಲಿ ನಡೆದ ತೃತೀಯರಂಗದ ಸಮಾವೇಶದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ 2ರಂದು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದರು.

ನೀವು ಜೆಡಿಎಸ್ ಅನ್ನು ಆಶೀರ್ವದಿಸಿ, ಈ ರಾಜ್ಯದಲ್ಲಿ ಮುಂದೆ ಏನ್ ಮಾಡುತ್ತೇವೆ ಎಂಬುದನ್ನು ಮಾಡಿ ತೋರಿಸುತ್ತೇನೆ ಎಂದು ತಿಳಿಸಿದ ಅವರು ಕಾಂಗ್ರೆಸ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಗ ಕುಮಾರಸ್ವಾಮಿ ನನ್ನ ಅನುಮತಿ ಇಲ್ಲದೇ ಬಿಜೆಪಿ ಜತೆ ಕೈ ಜೋಡಿಸುವ ಮೂಲಕ ಕೋಮುವಾದಿ ಶಕ್ತಿಗಳು ರಾಜ್ಯದಲ್ಲಿಂದು ಬಲಿಷ್ಠರಾಗುವಂತಾಗಿದೆ. ಈ ಕೋಮುಶಕ್ತಿಗಳನ್ನು ಬಗ್ಗು ಬಡಿಯಬೇಕಿದ್ದರೆ, ಮತದಾರರು ಜೆಡಿಎಸ್‌ಗೆ ಸಂಪೂರ್ಣ ಆಶೀರ್ವಾದ ನೀಡಬೇಕು ಎಂದು ನೆರೆದ ಜನಸ್ತೋಮಕ್ಕೆ ಮನವಿ ಮಾಡಿಕೊಂಡರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 28ಕ್ಷೇತ್ರಗಳಲ್ಲಿಯೂ ಜೆಡಿಎಸ್ ಸ್ಪರ್ಧಿಸಲಿದೆ, ಅದರಲ್ಲಿ ಮಂಗಳೂರು ಮತ್ತು ಉಡುಪಿ ಕ್ಷೇತ್ರವನ್ನು ಸಿಪಿಎಂ, ಸಿಪಿಐಗೆ ಬಿಟ್ಟುಕೊಡಲಾಗಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ನೀತಿ ಸಂಹಿತೆ ಅತೀಯಾಯ್ತು': ದೇವೇಗೌಡ ಕಿಡಿ
ಆಚಾರ್ಯಗೆ ಮುಜರಾಯಿ ಇಲಾಖೆ ಸೂಕ್ತ: ಸಿದ್ದರಾಮಯ್ಯ
ನೀತಿ ಸಂಹಿತೆ ಉಲ್ಲಂಘಿಸಿಲ್ಲ: ಯಡಿಯೂರಪ್ಪ
ಗದಗ್‌ನಲ್ಲಿ 76ನೇ ಕನ್ನಡ ಸಾಹಿತ್ಯ ಸಮ್ಮೇಳನ
ಹಿಂದೂ ಸಮಾಜೋತ್ಸವ ತಡೆಯಲು ಸಾಧ್ಯವಿಲ್ಲ: ರವಿ
ರಾಜ್ಯವನ್ನು ಬಿಜೆಪಿ ಅರಾಜಕತೆಯತ್ತ ದೂಡಿದೆ: ಉಗ್ರಪ್ಪ