ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭಯೋತ್ಪಾದನೆ ನಿಗ್ರಹ ಭಾರತಕ್ಕೆ ಮಾತ್ರ ಸಾಧ್ಯ: ರಾಮಚಂದ್ರ ಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದನೆ ನಿಗ್ರಹ ಭಾರತಕ್ಕೆ ಮಾತ್ರ ಸಾಧ್ಯ: ರಾಮಚಂದ್ರ ಗೌಡ
ಮನುಕುಲಕ್ಕೆ ಮಾರಕವಾಗಿರುವ ಭಯೋತ್ಪಾದನೆ ತಡೆಯಲು ಭಾರತಕ್ಕೆ ಮಾತ್ರ ಸಾಧ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ಹೇಳಿದರು.

ಅವರು ವಾರಣಾಸಿಯಲ್ಲಿ ನಡೆದ ಆದಿಚುಂಚನಗಿರಿಯ 33ನೇ ಶಾಖಾ ಮಠದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಡೀ ಜಗತ್ತು ಇಂದು ಅನ್ಯಾಯ, ಭಯದ ನೆರಳಿನಲ್ಲಿದೆ. ಧರ್ಮಗುರುಗಳು ಮಾತ್ರ ನೆಮ್ಮದಿ ನೆಲೆಯಲ್ಲಿ ಜನರನ್ನು ಮುನ್ನಡೆಸಲು ಸಾಧ್ಯ ಎಂದು ಅವರು ತಿಳಿಸಿದರು. ಭಾರತೀಯರೆಲ್ಲರ ಭಕ್ತಿ ಗೌರವಕ್ಕೆ ಪಾತ್ರರಾಗಿರುವ ಕಾಶಿಯಲ್ಲಿ ಆದಿಚುಂಚನಗಿರಿ ಮಠದ ಶಾಲೆ ಆರಂಭವಾಗಿರುವುದು ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಮಠಾಧೀಶರಾದ ಬಾಲಗಂಗಾಧರನಾಥ ಸ್ವಾಮೀಜಿ ಇಂಥ ಕ್ಷೇತ್ರದಲ್ಲಿ ಶಾಖಾ ಮಠ ತೆರೆದು ಜನತೆಗೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಮಾಡಿದ ಸಂಕಲ್ಪ ಇಂದು ನೆರವೇರಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ದೇಶ ವಿಭಜಿಸಲು ಹೊರಟಿದೆ: ವೆಂಕಯ್ಯ ನಾಯ್ಡು
ಬೆಳಗಾವಿ ಧ್ವಜ ವಿವಾದ: ಡಿಸಿ ವರದಿ ಆಯೋಗಕ್ಕೆ ರವಾನೆ
ಏರ್ ಡೆಕ್ಕನ್‌‌ ಸಂಸ್ಥಾಪಕ ಕ್ಯಾ.ಗೋಪಿನಾಥ್ ಲೋಕಸಭಾ ಅಖಾಡಕ್ಕೆ
ರಾಜಧಾನಿಯಲ್ಲಿ ಹಾಡಹಗಲೇ ಮತ್ತೊಂದು ಕೊಲೆ
ನೀತಿ ಸಂಹಿತೆ ಅರಿತು ಕೆಲಸ ಮಾಡಿ: ಯಡಿಯೂರಪ್ಪ
ಎಸ್.ಎಂ.ಕೃಷ್ಣ-ಜಾಫರ್ ಷರೀಫ್ ಬಂಡಾಯದ ಬಾವುಟ?