ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗುಲ್ಬರ್ಗಾ: ದೋಣಿ ಮುಳುಗಿ ಐವರು ಜಲಸಮಾಧಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಲ್ಬರ್ಗಾ: ದೋಣಿ ಮುಳುಗಿ ಐವರು ಜಲಸಮಾಧಿ
ಮಾರಮ್ಮದೇವಿ ದರ್ಶನ ಪಡೆದು ಭೀಮಾನದಿಯನ್ನು ದಾಟಿ ಊರಿಗೆ ವಾಪಸಾಗುತ್ತಿದ್ದ ವೇಳೆ ದೋಣಿ ಮುಳುಗಿದ ಪರಿಣಾಮ ಆರು ವರ್ಷದ ಬಾಲಕಿ ಸೇರಿದಂತೆ ಐದು ಮಂದಿ ಜೀವಂತ ಸಮಾಧಿಯಾದ ಘಟನೆ ಗುರುವಾರ ನಡೆದಿದೆ.

ಮಾರಮ್ಮ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಊರಿಗೆ ದೋಣಿಯಲ್ಲಿ ಮರಳುತ್ತಿರುವ ಸಂದರ್ಭದಲ್ಲಿ, ದುರ್ಬಲಗೊಂಡಿದ್ದ ದೋಣಿಯೊಳಗೆ ನೀರು ತುಂಬಿ ಈ ದುರಂತ ಸಂಭವಿಸಿದೆ. ದೋಣಿಯಲ್ಲಿ 12ಮಂದಿ ಪ್ರಯಾಣಿಸುತ್ತಿದ್ದು, ಐದು ಮಂದಿ ಜಲಸಮಾಧಿಯಾಗಿದ್ದಾರೆ.

ಆರು ವರ್ಷದ ರಾಜೇಶ್ವರಿ, ಫರತಾಬಾದ್ ಶೇಖಾಪುರದ ವಿಷ್ಣುವರ್ಧನ್, ಬಂಗಾರಿಯಮ್ಮ, ಸೀತಮ್ಮ , ಸಂಗಮ್ಮ ಸೇರಿದಂತೆ ಐದು ಮಂದಿ ಜೀವಂತ ಸಮಾಧಿಯಾಗದ್ದರೆ, ಉಳಿದ ಏಳು ಮಂದಿ ಅಪಾಯದಿಂದ ಪಾರಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ದೋಣಿ ಮುಳುಗುತ್ತಿದ್ದುದನ್ನು ಗಮನಿಸಿದ ನಾವಿಕ ನೀರಿಗೆ ಹಾರಿ ಈಜಿ ದಡ ಸೇರಿ ಪರಾರಿಯಾಗಿದ್ದಾನೆ, ಆತನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಅಗ್ನಿಶಾಮಕದಳ ಹಾಗೂ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಶವಗಳನ್ನು ಹೊರತೆಗೆಯಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಯೋತ್ಪಾದನೆ ನಿಗ್ರಹ ಭಾರತಕ್ಕೆ ಮಾತ್ರ ಸಾಧ್ಯ: ರಾಮಚಂದ್ರ ಗೌಡ
ಕಾಂಗ್ರೆಸ್ ದೇಶ ವಿಭಜಿಸಲು ಹೊರಟಿದೆ: ವೆಂಕಯ್ಯ ನಾಯ್ಡು
ಬೆಳಗಾವಿ ಧ್ವಜ ವಿವಾದ: ಡಿಸಿ ವರದಿ ಆಯೋಗಕ್ಕೆ ರವಾನೆ
ಏರ್ ಡೆಕ್ಕನ್‌‌ ಸಂಸ್ಥಾಪಕ ಕ್ಯಾ.ಗೋಪಿನಾಥ್ ಲೋಕಸಭಾ ಅಖಾಡಕ್ಕೆ
ರಾಜಧಾನಿಯಲ್ಲಿ ಹಾಡಹಗಲೇ ಮತ್ತೊಂದು ಕೊಲೆ
ನೀತಿ ಸಂಹಿತೆ ಅರಿತು ಕೆಲಸ ಮಾಡಿ: ಯಡಿಯೂರಪ್ಪ