ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಡಿ.ಮಂಜುನಾಥ್‌ಗೆ ಟಿಕೆಟ್ ನೀಡಬೇಡಿ: ಮಾದಿಗ ಸಮಿತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಿ.ಮಂಜುನಾಥ್‌ಗೆ ಟಿಕೆಟ್ ನೀಡಬೇಡಿ: ಮಾದಿಗ ಸಮಿತಿ
ಮಾಜಿ ಸಚಿವ ಡಿ. ಮಂಜುನಾಥ್ ಅವರಿಗೆ ಟಿಕೆಟ್ ನೀಡದಿರುವಂತೆ ಮಾದಿಗ ದಂಡೋರ ಸಮಿತಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಒತ್ತಾಯಿಸಿದೆ. ಮಂಜುನಾಥ್ ಅವರಿಗೆ ಚಿತ್ರದುರ್ಗದಿಂದ ಟಿಕೆಟ್ ನೀಡಬಾರದೆಂದು ಜೆಡಿಎಸ್ ವರಿಷ್ಠರಿಗೆ ಸಮಿತಿಯ ಮುಖಂಡರು ಮನವಿ ಮಾಡಿದ್ದಾರೆ.

ಮಂಜುನಾಥ್ ಅವರು ಪರಿಶಿಷ್ಟ ಜಾತಿಯ ಎಲ್ಲಾ ರಾಜಕೀಯ ಸವಲತ್ತುಗಳನ್ನು ಅನುಭವಿಸಿದ್ದರೂ ಚಿತ್ರದುರ್ಗ ಜಿಲ್ಲೆಯ ಹಾಗೂ ಪರಿಶಿಷ್ಟ ಜನಾಂಗದ ಅಭಿವೃದ್ದಿ ಕೆಲಸ ಮಾಡುವಲ್ಲಿ ವಿಫಲವಾಗಿರುವ ಕಾರಣ ಟಿಕೆಟ್ ನೀಡಬಾರದೆಂಬುದು ಸಮಿತಿಯ ಆರೋಪವಾಗಿದೆ.

ಈ ಕುರಿತು ಮಾಹಿತಿ ನೀಡಿದ ಸಮಿತಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಬ್ಬೂರು ಪರಮೇಶ್ವರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಕೆ. ಗುರುಶಾಮಯ್ಯ ಅವರು ಜಂಟಿಯಾಗಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವದ ಅನುಸಾರ ಮೀಸಲಾತಿ ಸೌಲಭ್ಯವನ್ನು ಪ್ರತಿಯೊಬ್ಬ ಸಾಮಾನ್ಯ ದಲಿತನಿಗೂ ತಲುಪಿಸುವ ಕಾರ್ಯ ಕೈಗೊಳ್ಳುವ ಸಮರ್ಥ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಹಳೆಯ ಅತ್ತೆ ಬಿಜೆಪಿ ಹೊಸ ಸೊಸೆ: ಜಗ್ಗೇಶ್
ಬಿಜೆಪಿ ಕದತಟ್ಟುತ್ತಿರುವ ಕಾಂಗ್ರೆಸ್‌ನ 'ಅತಿರಥ-ಮಹಾರಥರು'
ಗುಲ್ಬರ್ಗಾ: ದೋಣಿ ಮುಳುಗಿ ಐವರು ಜಲಸಮಾಧಿ
ಭಯೋತ್ಪಾದನೆ ನಿಗ್ರಹ ಭಾರತಕ್ಕೆ ಮಾತ್ರ ಸಾಧ್ಯ: ರಾಮಚಂದ್ರ ಗೌಡ
ಕಾಂಗ್ರೆಸ್ ದೇಶ ವಿಭಜಿಸಲು ಹೊರಟಿದೆ: ವೆಂಕಯ್ಯ ನಾಯ್ಡು
ಬೆಳಗಾವಿ ಧ್ವಜ ವಿವಾದ: ಡಿಸಿ ವರದಿ ಆಯೋಗಕ್ಕೆ ರವಾನೆ