ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಿಂದುತ್ವದ ವಿರೋಧಿಗಳಿಗೆ ಬಿಜೆಪಿ ಟಿಕೆಟ್: ಮುತಾಲಿಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಂದುತ್ವದ ವಿರೋಧಿಗಳಿಗೆ ಬಿಜೆಪಿ ಟಿಕೆಟ್: ಮುತಾಲಿಕ್
NRB
ಹಿಂದುತ್ವದ ವಿರೋಧಿಗಳನ್ನು ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಇನ್ನೊಂದು ಕಾಂಗ್ರೆಸ್ ಪಕ್ಷದಂತಾಗಿದೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಬಿಜೆಪಿಯನ್ನು ಇನ್ನು ಮುಂದೆ 'ಕೇಸರಿ ಕಾಂಗ್ರೆಸ್' ಎಂದು ಕರೆಯಬೇಕಾಗಿದೆ. ಬಿಜೆಪಿಯ ಪ್ರಮುಖ ಅಭ್ಯರ್ಥಿಗಳ ವಿರುದ್ದ ಸೇನೆಯ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಹಿಂದುತ್ವವನ್ನು ಹೀಯಾಳಿಸಿದ ಮುಖಂಡರನ್ನೇ ಬಿಜೆಪಿ ಸೇರಿಸಿಕೊಂಡಿದೆ. ಪ್ರತಿ ಮತಗಟ್ಟೆಯಲ್ಲೂ ಪಕ್ಷದ ಕಾರ್ಯಕರ್ತರಿದ್ದಾರೆಂದು ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹೇಳುತ್ತಾರೆ. 28ಕ್ಷೇತ್ರಗಳಿಗೆ 16ಮಂದಿ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಅಷ್ಟು ಕಾರ್ಯಕರ್ತರು ನಿಮ್ಮ ಬಳಿ ಇರಲಿಲ್ಲವೇ?ಎಂದು ಅವರು ಸದಾನಂದಗೌಡರನ್ನು ಪ್ರಶ್ನಿಸಿದರು.

ಕೇಂದ್ರ ಗೃಹಸಚಿವರೇ ನನ್ನ ಜೀವಕ್ಕೆ ಬೆದರಿಕೆ ಇದೆ ಎಂದು ತಿಳಿಸಿದರೂ ಕೂಡ, ಈ ಸರ್ಕಾರಕ್ಕೆ ನಮ್ಮ ಜತೆ ಮಾತನಾಡುವಷ್ಟು ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇದೊಂದು ಕೆಟ್ಟ ಸರ್ಕಾರ ಎಂದು ಟೀಕಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು ದಕ್ಷಿಣ ಅಖಾಡ-ಘಟಾನುಘಟಿಗಳ ಹಣಾಹಣಿ
ಎಚ್‌ಡಿಕೆ ಯಾರನ್ನು ಕೇಳಿ ಬಳ್ಳಾರಿಗೆ ಹೋಗಿದ್ರು: ಸಿಎಂ
ಶಾಸಕ ವಿ.ಸೋಮಣ್ಣ ಕಾಂಗ್ರೆಸ್‌ಗೆ ಗುಡ್‌‌ಬೈ
ಕಾಂಗ್ರೆಸ್‌ನ್ನು ಹೊಗಳಿ ಅಟ್ಟಕ್ಕೇರಿಸಿದ ಅನಂತಮೂರ್ತಿ !
ಟಿವಿ 9ಗೆ ಪ್ರತಿಷ್ಠಿತ ಗೋಯಂಕಾ ಪ್ರಶಸ್ತಿ
ಮೈಸೂರು ಗಲಭೆ: ಪರಿಸ್ಥಿತಿ ಶಾಂತ-ನಿಷೇಧಾಜ್ಞೆ ಮುಂದುವರಿಕೆ