ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಂಬರೀಷ್‌ನಂತ ಸಂಸದ ಯಾಕೆ ಬೇಕು?: ನಾಗತಿಹಳ್ಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂಬರೀಷ್‌ನಂತ ಸಂಸದ ಯಾಕೆ ಬೇಕು?: ನಾಗತಿಹಳ್ಳಿ
NRB
ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವುದು ಅವರು ಸಂಸತ್ ಕಲಾಪಗಳಲ್ಲಿ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡು ನೂತನ ಯೋಜನೆಗಳನ್ನು ಅವರ ಕ್ಷೇತ್ರಕ್ಕೆ ವಿನಿಯೋಗಿಸಲಿ ಎಂಬ ಕಾರಣಕ್ಕಾಗಿ. ಆದರೆ ಸಂಸತ್‌ಗೆ ಹೋಗದಿದ್ದ ಮೇಲೆ ಅವರು ನಮಗೆ ಯಾಕೆ ಬೇಕು ಎಂದು ಅಂಬರೀಷ್ ವಿರುದ್ಧ ಚಿತ್ರ ನಿರ್ದೇಶಕ ನಾಗತಿಹಳ್ಳಿ ಪರೋಕ್ಷವಾಗಿ ಟೀಕಿಸಿದ್ದಾರೆ.

ಯಾವುದೇ ವ್ಯಕ್ತಿಯಾಗಲಿ ಒಂದು ಜವಾಬ್ದಾರಿಯನ್ನು ಹೊತ್ತ ಮೇಲೆ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಅದು ಆಗದಿದ್ದ ಮೇಲೆ ಅಂತಹ ಕ್ಷೇತ್ರಕ್ಕೆ ಯಾಕೆ ಇಳಿಯಬೇಕು ಎಂದು ಅಂಬರೀಷ್ ವಿರುದ್ಧ ಕಿಡಿಕಾರಿದರು.

ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಯೋಗ್ಯ ಅಭ್ಯರ್ಥಿಗಳನ್ನು ಚುನಾಯಿಸದಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ರಾಷ್ಟ್ರೀಯ ಪಕ್ಷ ಎಂದು ಹೇಳುತ್ತಿರುವ ಕೆಲವು ಪಕ್ಷಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು.

ಇಂದು ನಮ್ಮಲ್ಲಿ ಶ್ರಮ ಸಂಸ್ಕೃತಿ ಮಾಯವಾಗುತ್ತಿದೆ. ದುಡಿಯುವ ಬದಲು ಮೋಸದಿಂದ ಹಣ ಮಾಡಲು ಪ್ರಯತ್ನಿಸುತ್ತಾರೆ. ಭ್ರಷ್ಟಾಚಾರ ನಿರ್ಮೂಲನೆಗೆ ಯುವಕರು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿಯಿಂದ ಯೋಗೇಶ್ವರ್‌ಗೆ ಬ್ಲಾಕ್‌ಮೇಲ್: ಎಚ್‌ಡಿಕೆ
ಹಿಂದುತ್ವದ ವಿರೋಧಿಗಳಿಗೆ ಬಿಜೆಪಿ ಟಿಕೆಟ್: ಮುತಾಲಿಕ್
ಬೆಂಗಳೂರು ದಕ್ಷಿಣ ಅಖಾಡ-ಘಟಾನುಘಟಿಗಳ ಹಣಾಹಣಿ
ಎಚ್‌ಡಿಕೆ ಯಾರನ್ನು ಕೇಳಿ ಬಳ್ಳಾರಿಗೆ ಹೋಗಿದ್ರು: ಸಿಎಂ
ಶಾಸಕ ವಿ.ಸೋಮಣ್ಣ ಕಾಂಗ್ರೆಸ್‌ಗೆ ಗುಡ್‌‌ಬೈ
ಕಾಂಗ್ರೆಸ್‌ನ್ನು ಹೊಗಳಿ ಅಟ್ಟಕ್ಕೇರಿಸಿದ ಅನಂತಮೂರ್ತಿ !