ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರು: ಸೀತಾರಾಂ ಯೆಚೂರಿ ಕಾರು ವಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರು: ಸೀತಾರಾಂ ಯೆಚೂರಿ ಕಾರು ವಶ
PTI
ಸಿಪಿಐ(ಎಂ)ನ ಪಾಲಿಟ್ ಬ್ಯೂರೋ ಸದಸ್ಯ ಸೀತಾರಾಂ ಯೆಚೂರಿ ಅವರು ಮಂಗಳೂರಿನಿಂದ ಕಾಸರಗೋಡಿನ ಕಣ್ಣೂರಿಗೆ ತೆರಳುತ್ತಿರುವ ಸಂದರ್ಭದಲ್ಲಿ ಚುನಾವಣೆಯ ಚಿಹ್ನೆ ಬಳಸಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಅವರ ಕಾರನ್ನು ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.

ಯೆಚೂರಿ ಅವರ ಕಾರಿನ ಮುಂಭಾಗದಲ್ಲಿ ಪಕ್ಷದ ಚಿಹ್ನೆ ಬಳಸಿದ್ದು, ಇದು ನೀತಿ ಸಂಹಿತೆಯ ಉಲ್ಲಂಘನೆ ಎಂಬ ಹಿನ್ನೆಲೆಯಲ್ಲಿ ಕಾವೂರು ಪೊಲೀಸರು ಅವರ ಕಾರನ್ನು ವಶಪಡಿಸಿಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ಯೆಚೂರಿ ಅವರು ಪೊಲೀಸರೊಂದಿಗೆ ಚರ್ಚೆ ನಡೆಸಿ, ಇದು ಚುನಾವಣೆಯ ಚಿಹ್ನೆಯಲ್ಲ ಎಂಬುದಾಗಿ ಸಮಜಾಯಿಷಿಕೆ ನೀಡಿದರು.

ಏತನ್ಮಧ್ಯೆ ಸೀತಾರಾಂ ಯೆಚೂರಿ ಅವರು ಬೇರೊಂದು ಕಾರಿನಲ್ಲಿ ಕಣ್ಣೂರಿಗೆ ತೆರಳಿದರು. ಬಳಿಕ ಚಿಹ್ನೆಯನ್ನು ಪರಿಶೀಲಿಸಿದ ಅಧಿಕಾರಿಗಳು ಅದು ಪಕ್ಷದ ಚಿಹ್ನೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಕಾರನ್ನು ಬಿಡುಗಡೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಸ್ಲಿಮರ ವಿರುದ್ಧ ನಾನೇನು ಹೇಳಿಲ್ಲ: ಅನಂತಕುಮಾರ್ ಹೆಗಡೆ
ಮಾಜಿ ಸಚಿವ ಹಾರ್ನಳ್ಳಿ ರಾಮಸ್ವಾಮಿ ವಿಧಿವಶ
ಅಂಬರೀಷ್‌ನಂತ ಸಂಸದ ಯಾಕೆ ಬೇಕು?: ನಾಗತಿಹಳ್ಳಿ
ಬಿಜೆಪಿಯಿಂದ ಯೋಗೇಶ್ವರ್‌ಗೆ ಬ್ಲಾಕ್‌ಮೇಲ್: ಎಚ್‌ಡಿಕೆ
ಹಿಂದುತ್ವದ ವಿರೋಧಿಗಳಿಗೆ ಬಿಜೆಪಿ ಟಿಕೆಟ್: ಮುತಾಲಿಕ್
ಬೆಂಗಳೂರು ದಕ್ಷಿಣ ಅಖಾಡ-ಘಟಾನುಘಟಿಗಳ ಹಣಾಹಣಿ