ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ ಬಿಡುಗಡೆಗೆ ಹಣ ನೀಡಿದ್ದು ನಿಜ: ಶಿವರಾಜ್‌ಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ ಬಿಡುಗಡೆಗೆ ಹಣ ನೀಡಿದ್ದು ನಿಜ: ಶಿವರಾಜ್‌ಕುಮಾರ್
ಮಾವ ಬಂಗಾರಪ್ಪ ಪರ ಪ್ರಚಾರಕ್ಕೆ ಹೋಗಲ್ಲ...
ಡಾ.ರಾಜ್‌‌ಕುಮಾರ್ ಅವರನ್ನು ನರಹಂತಕನ ವೀರಪ್ಪನ್ ಕೈಯಿಂದ ಬಿಡಿಸಿಕೊಂಡು ಬರಲು ಹಣ ಕೊಟ್ಟಿದ್ದು ನಿಜ. ಆದರೆ ಎಷ್ಟೆಂದು ಕೇಳಬೇಡಿ. ಅದು ಮುಗಿದು ಹೋದ ಅಧ್ಯಾಯ ಎಂದು ನಟ ಶಿವರಾಜ್‌‌ಕುಮಾರ್ ತಿಳಿಸಿದರು.

ಸಿನಿ ಪತ್ರಕರ್ತರು ಏರ್ಪಡಿಸಿದ ಸಂವಾದದಲ್ಲಿ ಮಾತನಾಡಿದ ಅವರು , ದುಡ್ಡು ಕೊಟ್ಟು ಬಿಡಿಸಿದ್ದಕ್ಕೆ ಅಪ್ಪಾಜಿಗೂ ಬೇಸರವಿತ್ತು ಎಂದ ಅವರು, ದುಡ್ಡು ಕೊಟ್ಟಿದ್ದು ಸರ್ಕಾರವೋ ಅಥವಾ ತಮ್ಮ ಕುಟುಂಬವೋ ಎಂಬ ಬಗ್ಗೆ ಏನನ್ನು ವಿವರಣೆ ನೀಡಲಿಲ್ಲ.

ಅಪ್ಪಾಜಿ ಕಾಡಿನಿಂದ ಬರುವಾಗ ಕೆಲವರು ಆಡಿದ ಚುಚ್ಚು ಮಾತು ಕೇಳಿ ಮಾನಸಿಕವಾಗಿ ನೊಂದಿದ್ದರು. ಅದೆಲ್ಲಾ ಈಗ ಮುಗಿದ ಅಧ್ಯಾಯ. ಇದನ್ನು ಕೆದಕುತ್ತಾ ಹೋದರೆ ಏನೇನೋ ಆಗುತ್ತದೆ. ಈಗ ಅಪ್ಪಾಜಿಯೂ ಇಲ್ಲ. ವೀರಪ್ಪನ್ ಸಹ ಇಲ್ಲ ಎಂದು ಹೇಳಿದರು.

ರಾಜ್ ಅಪಹರಣ ಸಂದರ್ಭದಲ್ಲಿ ಕನ್ನಡ ಜನತೆಯ ಸಹಕಾರವನ್ನು ನೆನೆದ ಅವರು, ಅಪ್ಪಾಜಿ ಅಪಹರಣವಾದಾಗ ನಮ್ಮ ಮನೆ ಸರ್ವಧರ್ಮ ಸಮನ್ವಯ ಕೇಂದ್ರವಾಗಿತ್ತು. ಒಂದೇ ಕಾಲಕ್ಕೆ ಅದು ದೇವಸ್ಥಾನ, ಚರ್ಚ್ ಹಾಗೂ ಮಸೀದಿಯಾಗಿತ್ತು. ಎಲ್ಲರು ಬಂದು ಅಪ್ಪಾಜಿಯ ಬಿಡುಗಡೆಗಾಗಿ ಪ್ರಾರ್ಥಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಿವಣ್ಣ, ಯಾವುದೇ ಕಾರಣಕ್ಕೂ ರಾಜಕೀಯ ಸೇರುವುದಿಲ್ಲ. ನನಗೆ ರಾಜಕೀಯ ಒಗ್ಗುವುದೂ ಇಲ್ಲ. ವೈಯಕ್ತಿಕ ಜೀವನದಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲ ಎಂದರು. ಮಾವ ಬಂಗಾರಪ್ಪನವರ ಪರ ಪ್ರಚಾರಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ಅವರು ನನ್ನನ್ನೆಂದೂ ಪ್ರಚಾರಕ್ಕೆ ಕರೆದಿಲ್ಲ. ನಾನು ಮಾಡೋದೂ ಇಲ್ಲ. ನಾವಿಬ್ಬರು ಮಾವ-ಅಳಿಯ ಎನ್ನುವುದಕ್ಕಿಂತ ಸ್ನೇಹಿತರ ಹಾಗಿದ್ದೀವಿ ಎಂದು ಉತ್ತರಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಕತ್ತಿದ್ದರೆ ನನ್ನ ಬಂಧಿಸಿ: ಕುಮಾರಸ್ವಾಮಿ
ಲೋಕಸಭೆ: ಕೃಷ್ಣಬೈರೇಗೌಡ, ವಾಟಾಳ್ ನಾಮಪತ್ರ
ಸಂಸದನಾದ್ರೂ ಮುಖ್ಯಮಂತ್ರಿ ಯಾಕೆ ಆಗಬಾರದು: ಖರ್ಗೆ
ತನಿಖೆ ಎದುರಿಸಲು ಸಿದ್ದ: ಕಾಗೋಡು ತಿಮ್ಮಪ್ಪ
ಮಂಗಳೂರು: ಸೀತಾರಾಂ ಯೆಚೂರಿ ಕಾರು ವಶ
ಮುಸ್ಲಿಮರ ವಿರುದ್ಧ ನಾನೇನು ಹೇಳಿಲ್ಲ: ಅನಂತಕುಮಾರ್ ಹೆಗಡೆ