ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪೊಲೀಸ್ ಎನ್‌ಕೌಂಟರ್‌ಗೆ ರೌಡಿ ಪರಂಧಾಮ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೊಲೀಸ್ ಎನ್‌ಕೌಂಟರ್‌ಗೆ ರೌಡಿ ಪರಂಧಾಮ ಬಲಿ
ಬಿಜೆಪಿ ಕಾರ್ಯಕರ್ತ ಚಂದ್ರಶೇಖರ್ ಬಾಬು ಎಂಬುವವರ ಕೊಲೆ ಪ್ರಕರಣದ ಶಂಕಿತ ಆರೋಪಿ ಎನ್ನಲಾದ ರೌಡಿ ಪರಂಧಾಮ ಸೋಮವಾರ ಬೆಳಿಗ್ಗೆ ಪೊಲೀಸ್ ಶೂಟೌಟ್‌ಗೆ ಬಲಿಯಾಗಿರುವ ಘಟನೆ ನಡೆದಿದೆ.

ಶನಿವಾರ ಬೆಳಿಗ್ಗೆ ನಗರದ ಲಾಲ್‌ಬಾಗ್ ಸಮೀಪ ನಡೆದ ಬಿಜೆಪಿ ಕಾರ್ಯಕರ್ತ ಚಂದ್ರಶೇಖರ್ ಬಾಬು ಎಂಬುವರ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ರೌಡಿ ಪರಂಧಾಮ ಇಂದು ಬೆಳಿಗ್ಗೆ ಪರಪ್ಪನ ಅಗ್ರಹಾರ ಪ್ರದೇಶದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಪರಂಧಾಮನ ಚಲನವಲವನ್ನು ಗಮನಿಸುತ್ತಿದ್ದ ಅಪರಾಧ ವಿಭಾದದ ಪೊಲೀಸರ ತಂಡ ಆತ ಕೋರಮಂಗಲ ಪ್ರದೇಶದಲ್ಲಿರುವುದನ್ನು ಖಚತಪಡಿಸಿಕೊಂಡು ಸೆರೆ ಹಿಡಿಯಲು ಮುಂದಾದ ಸಂದರ್ಭದಲ್ಲಿ, ಆತ ಪರಾರಿಯಾಗಲು ಯತ್ನಿಸಿದ್ದ. ಅಲ್ಲದೇ ಪೊಲೀಸರತ್ತ ಗುಂಡು ಹಾರಿಸಿದಾಗ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಗಾಯಗೊಂಡಿದ್ದರು. ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದಾಗ ಪರಂಧಾಮ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.

ತಮಿಳುನಾಡು ಮೂಲದ ಪರಂಧಾಮ(30ವ), ಮೂರು ಕೊಲೆ ಮತ್ತು ಹಲವಾರು ಒತ್ತಾಯದ ಹಣ ವಸೂಲಿ ಪ್ರಕರಣಗಳಲ್ಲಿ ಬೇಕಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕ್ಯಾತಮಾರನಹಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಬಂಧನ
ಆಡ್ವಾಣಿ ಪ್ರಧಾನಿ ಕನಸು ನನಸಾಗದು: ಮೊಯ್ಲಿ
'ತಲೆ ಕತ್ತರಿಸಿ' ಹೇಳಿಕೆ: ರೇಣುಕಾಚಾರ್ಯ ವಿರುದ್ಧ ದೂರು
ಕೋಮುಭಾವನೆ ಕೆರಳಿಸುವ ಬಿಜೆಪಿಗೆ ಪಾಠ ಕಲಿಸಿ: ಗೌಡ
ಹಿಂದುತ್ವದ ವಿರೋಧಿಗಳ ಕತ್ತು ಕತ್ತರಿಸಿ: ರೇಣುಕಾಚಾರ್ಯ
ಕಾಗೋಡು ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ