ಲೋಕಸಭಾ ಚುನಾವಣೆಯಲ್ಲಿ ಬಂಗಾರಪ್ಪ ಸೋಲೋದು ಖಚಿತ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭವಿಷ್ಯ ನುಡಿಯುತ್ತಾರಲ್ಲ, ಮತದಾರರು ಅವರ ಕಿಸೆಯಲ್ಲಿದ್ದಾರೆಯೇ? ಎಂದು ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಎಸ್.ಬಂಗಾರಪ್ಪ ಪ್ರಶ್ನಿಸಿದ್ದಾರೆ.
ಸೋಲಲು ಸಿದ್ದನಿದ್ದೇನೆಂದೆ ಇದುವರೆಗೂ ಗೆಲ್ಲುತ್ತಾ ಬಂದಿದ್ದೇನೆ, ನಾನೇ ಸುಪೀರಿಯರ್ ಅಂಥ ಹೇಳಿಲ್ಲ. ಆದರೆ ನನ್ನ ವಿರೋಧಿಗಳನ್ನು ಸೋಲಿಸಿ ಎಂದು ಮತದಾರರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಸಮಾಜವಾದಿ ಪಕ್ಷಕ್ಕೆ ಗುಡ್ ಬೈ ಹೇಳಿ ಮತ್ತೆ ಕಾಂಗ್ರೆಸ್ ಕೈ ಹಿಡಿದ ಹಿರಿಯ ಮುಖಂಡ ಬಂಗಾರಪ್ಪ ಅವರು, ತಮ್ಮ ಇಬ್ಬರು ಪುತ್ರರೊಂದಿಗೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ವಿವಿಧ ಜಾತಿ, ಜನಾಂಗದ ಸಂಘ-ಸಂಸ್ಥೆಗಳಿಗೆ ಯಥೇಚ್ಛವಾಗಿ ದುಡ್ಡು ಕೊಡ್ತಿದ್ದಾರೆ, ಮತದಾರರನ್ನು ಓಲೈಸಿಕೊಳ್ಳಲು ಏನೆಲ್ಲಾ ಅಕ್ರಮಗಳನ್ನು ಎಸಗುತ್ತಿದ್ದಾರೆ ಎಂದು ದೂರಿದರು.
ಈ ಬಗ್ಗೆ ಜಿಲ್ಲಾ ಹಾಗೂ ರಾಜ್ಯ ಚುನಾವಣಾಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದೆ. ಆದರೂ ಏನೂ ಪ್ರಯೋಜನವಾಗದ ಕಾರಣ ಮುಖ್ಯ ಚುನಾವಣಾ ಆಯುಕ್ತರಿಗೆ ದೂರನ್ನು ಫ್ಯಾಕ್ಸ್ ಮಾಡಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. |