ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೊನೆಗೂ ಮಂಡ್ಯದ ಅಖಾಡಕ್ಕೆ ಧುಮುಕಿದ ಅಂಬರೀಶ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊನೆಗೂ ಮಂಡ್ಯದ ಅಖಾಡಕ್ಕೆ ಧುಮುಕಿದ ಅಂಬರೀಶ್
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ 'ರೆಬೆಲ್' ಸ್ಟಾರ್' ಅಂಬರೀಶ್ ಅವರೇ ಅಧಿಕೃತ ಅಭ್ಯರ್ಥಿ ಎಂದು ಮಂಗಳವಾರ ಘೋಷಿಸುವ ಮೂಲಕ ಬಿಕ್ಕಟ್ಟಿಗೆ ತೆರೆ ಎಳೆದಿದೆ.

ಮಂಡ್ಯದಿಂದ ಸ್ಪರ್ಧಿಸಲು ಮೀನ-ಮೇಷ ಎಣಿಸುತ್ತಿದ್ದ ಅಂಬಿ ನಿಲುವು ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿತ್ತು. ಅಸಮಾಧಾನ ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ಅಂಬಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಅಂತೂ ಕೊನೆಗೂ ಮಂಡ್ಯ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲು ಒಪ್ಪಿಗೆ ಸೂಚಿಸಿರುವ ಅವರು, ಏಪ್ರಿಲ್ 9ರಂದು ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ.

ತಾನು ಸ್ಪರ್ಧಿಸುವುದಾದರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾತ್ರ ಎಂದು ಸಂಸದ ಅಂಬರೀಶ್ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದರು. ಏತನ್ಮಧ್ಯೆ ಶಿವರಾಮೇಗೌಡರು ತಾನು ಮಂಡ್ಯ ಕ್ಷೇತ್ರದ ಹುರಿಯಾಳಾಗಿದ್ದು ತನಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದ ರೆಬೆಲ್ ಸ್ಟಾರ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಭೇಟಿಯಾಗಿ ಮಾತುಕತೆ ನಡೆಸುವ ಮೂಲಕ ಸಾಕಷ್ಟು ಊಹಾಪೋಹ ಹಬ್ಬಿತ್ತು. ಬಿಜೆಪಿ ಮುಖಂಡರು ಕೂಡ ಅಂಬಿ ಅವರನ್ನು ಸೆಳೆಯುವ ಪ್ರಯತ್ನದಲ್ಲಿರುವುದಾಗಿ ಮಾಹಿತಿ ದೊರೆತ ಪರಿಣಾಮ ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿತ್ತು.

17 ಲೋಕಸಭಾ ಕ್ಷೇತ್ರಕ್ಕೆ ಪ್ರಥಮ ಹಾಗೂ ದ್ವಿತೀಯ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದರೂ ಕೂಡ, ಅದರಲ್ಲಿ ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸದೆ ಇದ್ದಿರುವುದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವರಾಮೇಗೌಡ ಅಂತಿಮ ಗಡುವು ನೀಡಿ, ಕೊನೆಗೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದೀಗ ಕೊನೆಗೂ ಅಂಬರೀಶ್ ಮಂಡ್ಯದಿಂದ ಸ್ಪರ್ಧಿಸಲು ಕಾಂಗ್ರೆಸ್ ಮುಖಂಡರು ಮನವೊಲಿಸುವ ಮೂಲಕ ಅಖಾಡಕ್ಕೆ ಇಳಿಸಲು ಯಶಸ್ವಿಯಾಗಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾಂಗ್ಲಿಯಾನ ವಿರುದ್ಧ ಲಿಂಬಾವಳಿ ಆಕ್ರೋಶ
ಜೈಲಿಗೆ ಹೋಗಲು ತಯಾರು: ರೇಣುಕಾಚಾರ್ಯ
ಮತದಾರರು ಯಡಿಯೂರಪ್ಪ ಕಿಸೆಯಲ್ಲಿದ್ದಾರಾ?: ಬಂಗಾರಪ್ಪ
ರೈತರಿಗೆ ವೇತನ-ಬಜರಂಗ ದಳ ನಿಷೇಧ: ಜೆಡಿಎಸ್ ಪ್ರಣಾಳಿಕೆ
ಬಿಜೆಪಿ ಸ್ವೇಚ್ಛೆಯಿಂದ ವರ್ತಿಸುತ್ತಿದೆ: ಜನಾರ್ದನ ಪೂಜಾರಿ
ರಾಜಕಾರಣಿಗಳು ಸಂಯಮ ಕಳೆದುಕೊಳ್ಳಬಾರದು: ಸಿಎಂ