ಐದು ಮಂದಿ ದರೋಡೆಕೋರರ ತಂಡವೊಂದನ್ನು ಬಂಧಿಸಿರುವ ಬಸವನಗುಡಿ ಠಾಣೆಯ ಪೊಲೀಸರು 30ಲಕ್ಷ ರೂ. ಬೆಲೆಯ ಕಾರು, ಚಿನ್ನಾಭರಣ, 12ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬುಲ್ ಟೆಂಪಲ್ ರಸ್ತೆ ಬಿಎಂಎಸ್ ಕಾಲೇಜ್ ಟ್ರಸ್ಟ್ ಮುಂಭಾಗ ರಸ್ತೆಯಲ್ಲಿ ನಿಂತು ವಾಹನಗಳ ಚಾಲಕರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಹಣ, ಆಭರಣ ದೋಚುತ್ತಿದ್ದ ಆರೋಪಿಗಳನ್ನು ಬಸವನಗುಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗಿರಿನಗರದ ಬಿ.ಎಸ್.ಕೃಷ್ಣ ಆಲಿಯಾಸ್ ಭೀಮಯ್ಯ(39), ಕೆಂಪೇಗೌಡ ನಗರದ ಮಾದೇಶ (35), ಲೋಕೇಶ್(29), ಕೇರಳ ರಾಜ್ಯದ ಎಸ್.ಅನಿಲ್ ಕುಮಾರ್(30), ಸಿ.ಮನೋಜ್(30) ಎಂದು ಗುರುತಿಸಲಾಗಿದೆ.
ಆರೋಪಿ ಕೃಷ್ಣ ಮೂಲತಃ ಕೊಡಗಿನವನಾಗಿದ್ದು, ಬೆಂಗಳೂರಿಗೆ ಬಂದು ನಗರದ ಅನೇಕ ಹೆಸರಾಂತ ಟ್ರಾವೆಲ್ಸ್ಗಳಲ್ಲಿ ಕೆಲಸಮಾಡಿ ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡುತ್ತಿದ್ದ. ಮಾದೇಶ ಮತ್ತು ಲೋಕೇಶ್ ಅಣ್ಣ-ತಮ್ಮ ಅವರುಗಳು ಈ ಮೊದಲಿನಿಂದಲೂ ಕಳ್ಳತನ ಮಾಡಿ ನಕಲಿ ಮದ್ಯ ಸರಬರಾಜು ಮಾಡುವಲ್ಲಿ ನಿಪುಣರಾಗಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಅನಿಲ್ ಮತ್ತು ಮನೋಜ್ ಕೇರಳ ರಾಜ್ಯದ ಪಾಲ್ಘಾಟ್ ಜಿಲ್ಲೆಯವರಾಗಿದ್ದು. ಕಾರು ಕದ್ದು ಮದ್ಯ ಸರಬರಾಜು ದಂಧೆ ನಡೆಸುತ್ತಿದ್ದರು.
|