ದೇವೇಗೌಡರಿಗೆ ಅಷ್ಟಮ ಶನಿದೋಷ ಕಾಡುತ್ತಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲು ಖಚಿತ ಎಂದು ಶಾಸಕ ಸಿ.ಟಿ.ರವಿ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಸೋಲು ಖಚಿತ. ಬಿಜೆಪಿ ಅಭ್ಯರ್ಥಿ ಕೆ.ಹೆಚ್.ಹನುಮೇಗೌಡರು ಗೆಲುವು ಸಾಧಿಸಲಿದ್ದಾರೆ ಎಂದ ಅವರು, ಹಿಂದುತ್ವವನ್ನು ವಿರೋಧಿಸುವ ಕೈ ಕತ್ತರಿಸುತ್ತೇನೆ ಎನ್ನುವ ಹೇಳಿಕೆ ಅಪರಾಧ, ತಾವು ಹೇಳಿರುವ ತಿಥಿ ಮಾಡುವ ಹೇಳಿಕೆ ಕ್ರಿಮಿನಲ್ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನೆಂದೂ ತಿಥಿ ಮಾಡುತ್ತೇನೆಂದು ಹೇಳಿಲ್ಲ. ಜನ ತಿಥಿ ಮಾಡುತ್ತಾರೆಂದು ಹೇಳಿದ್ದೇನೆ. ಇದನ್ನು ನ್ಯಾಯಾಲಯದಲ್ಲಿ ರುಜುವಾತು ಮಾಡಲು ಸಿದ್ಧ. ಆದರೆ ಹೇಳಿಕೆ ನೀಡುತ್ತಿರುವವರು ನ್ಯಾಯಾಲಯದ ಖರ್ಚು ವೆಚ್ಚ ಭರಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದರು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ 24 ಕ್ಷೇತ್ರ ಬಿಜೆಪಿ ಪಾಲಾಗಲಿದ್ದು, ಅಡ್ವಾಣಿ ಪ್ರಧಾನಿಯಾಗುವುದು ಶತಸಿದ್ಧ ಎಂದರು. |