ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದೇವೇಗೌಡರಿಗೆ ಶನಿ ಹಿಡಿದಿದೆ: ಸಿ.ಟಿ.ರವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವೇಗೌಡರಿಗೆ ಶನಿ ಹಿಡಿದಿದೆ: ಸಿ.ಟಿ.ರವಿ
ದೇವೇಗೌಡರಿಗೆ ಅಷ್ಟಮ ಶನಿದೋಷ ಕಾಡುತ್ತಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲು ಖಚಿತ ಎಂದು ಶಾಸಕ ಸಿ.ಟಿ.ರವಿ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಸೋಲು ಖಚಿತ. ಬಿಜೆಪಿ ಅಭ್ಯರ್ಥಿ ಕೆ.ಹೆಚ್.ಹನುಮೇಗೌಡರು ಗೆಲುವು ಸಾಧಿಸಲಿದ್ದಾರೆ ಎಂದ ಅವರು, ಹಿಂದುತ್ವವನ್ನು ವಿರೋಧಿಸುವ ಕೈ ಕತ್ತರಿಸುತ್ತೇನೆ ಎನ್ನುವ ಹೇಳಿಕೆ ಅಪರಾಧ, ತಾವು ಹೇಳಿರುವ ತಿಥಿ ಮಾಡುವ ಹೇಳಿಕೆ ಕ್ರಿಮಿನಲ್ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನೆಂದೂ ತಿಥಿ ಮಾಡುತ್ತೇನೆಂದು ಹೇಳಿಲ್ಲ. ಜನ ತಿಥಿ ಮಾಡುತ್ತಾರೆಂದು ಹೇಳಿದ್ದೇನೆ. ಇದನ್ನು ನ್ಯಾಯಾಲಯದಲ್ಲಿ ರುಜುವಾತು ಮಾಡಲು ಸಿದ್ಧ. ಆದರೆ ಹೇಳಿಕೆ ನೀಡುತ್ತಿರುವವರು ನ್ಯಾಯಾಲಯದ ಖರ್ಚು ವೆಚ್ಚ ಭರಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದರು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ 24 ಕ್ಷೇತ್ರ ಬಿಜೆಪಿ ಪಾಲಾಗಲಿದ್ದು, ಅಡ್ವಾಣಿ ಪ್ರಧಾನಿಯಾಗುವುದು ಶತಸಿದ್ಧ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್-ಜೆಡಿಎಸ್ ಧೂಳೀಪಟವಾಗಲಿದೆ: ಯಡಿಯೂರಪ್ಪ
ಬಹಿರಂಗ ಚರ್ಚೆಗೆ ಸಿದ್ಧ: ಎಚ್.ಡಿ. ಕುಮಾರಸ್ವಾಮಿ
ಸಿಎಂಗೆ ಕವಡೆ ಕೊಟ್ಟು ಮೆಜೆಸ್ಟಿಕ್‌‌ನಲ್ಲಿ ಕೂರಿಸಬೇಕು: ಬಂಗಾರಪ್ಪ
ಕಾಂಗ್ರೆಸ್‌‌ನ ವಿ.ಸೋಮಣ್ಣ ಬಿಜೆಪಿ ಸೇರ್ಪಡೆ
ಕತ್ತೆ, ಒಂಟೆಗಳಿಗೆ ಪೂಜೆ ಸಲ್ಲಿಸಿದ ವಾಟಾಳ್!
ಬಿಜೆಪಿಯಿಂದ ಬೆದರಿಕೆಯ ರಾಜಕಾರಣ: ಹೊರಟ್ಟಿ