ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸ್ ಮಣ್ಣಾಗುತ್ತಿರುವ ಹಡಗು: ಚಂದ್ರೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಮಣ್ಣಾಗುತ್ತಿರುವ ಹಡಗು: ಚಂದ್ರೇಗೌಡ
ಕಾಂಗ್ರೆಸ್ ಪಕ್ಷದ ಹಾಲಿ ನಾಯಕರಿಗೆ ದೇಶದ ಹಿತಾಸಕ್ತಿ ಬಗ್ಗೆ ಗಮನ ನೀಡುವಷ್ಟು ಪುರುಸೊತ್ತಿಲ್ಲ ಎಂದು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಡಿ.ಬಿ.ಚಂದ್ರೇಗೌಡ ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಇತಿಹಾಸ, ತ್ಯಾಗ-ಬಲಿದಾನ ಗೊತ್ತಿಲ್ಲದವರು ಆ ಪಕ್ಷದ ಯಜಮಾನಿಕೆ ವಹಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ ಅವರು, ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಎಂದು ಹಿಂದೆ ಹೇಳಿದ್ದೆ. ಆದರೆ ಇದೀಗ ಆ ಪಕ್ಷ ಮಣ್ಣಾಗುತ್ತಿರುವ ಹಡಗು ಎಂಬುದು ಅರ್ಥವಾಗುತ್ತಿದೆ ಎಂದು ಲೇವಡಿ ಮಾಡಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ದೇಶದ ಚುಕ್ಕಾಣಿ ಹಿಡಿಯಲು ಬಿಜೆಪಿ ಮಾತ್ರ ಸಮರ್ಥ. ಅನುಭವಿ ನಾಯಕ ಎಲ್.ಕೆ.ಅಡ್ವಾಣಿ ಪ್ರಧಾನಿಯಾದರೆ ಮಾತ್ರ ಭದ್ರತೆ ಮತ್ತು ಸುರಕ್ಷತೆ ಸಾಧ್ಯ ಎಂದು ಹೇಳಿದರು.

ಚುನಾವಣೆಗೆ ಸ್ಪರ್ಧಿಸಿರುವ ನನ್ನನ್ನು ಕೆಲವರು ಮುದುಕರು ಎಂದು ಕರೆಯುತ್ತಿದ್ದಾರೆ, ಕರೆಯಲಿ ಪಾಪ, ವಯಸ್ಸಾಗುವುದು ನನ್ನ ತಪ್ಪೇ. ನನ್ನನ್ನು ಟೀಕಿಸಿರುವವರೂ ಕೂಡಾ ಒಂದು ದಿನ ಮುದುಕರಾಗುತ್ತಾರೆ. ಆದರೆ, ಕಾಂಗ್ರೆಸ್ ಜಾಫರ್ ಷರೀಫ್ ಸಾಹೇಬರಿಗೆ ಹೋಲಿಸಿದರೆ ನಾನು ಯುವಕ. ನಾನು ಅವರಿಗಿಂತ ನಾಲ್ಕು ವರ್ಷ ಚಿಕ್ಕವನು ಎಂದು ತಿರುಗೇಟು ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಂಗಾರಪ್ಪಗೆ ಸೋಲಿನ ಭೀತಿ: ಯಡಿಯೂರಪ್ಪ
ಮಠಾಧೀಶರು ರಾಜಕೀಯದಿಂದ ದೂರವಿರಬೇಕು: ಮುರುಘಶ್ರೀ
ದೇವೇಗೌಡರಿಗೆ ಶನಿ ಹಿಡಿದಿದೆ: ಸಿ.ಟಿ.ರವಿ
ಕಾಂಗ್ರೆಸ್-ಜೆಡಿಎಸ್ ಧೂಳೀಪಟವಾಗಲಿದೆ: ಯಡಿಯೂರಪ್ಪ
ಬಹಿರಂಗ ಚರ್ಚೆಗೆ ಸಿದ್ಧ: ಎಚ್.ಡಿ. ಕುಮಾರಸ್ವಾಮಿ
ಸಿಎಂಗೆ ಕವಡೆ ಕೊಟ್ಟು ಮೆಜೆಸ್ಟಿಕ್‌‌ನಲ್ಲಿ ಕೂರಿಸಬೇಕು: ಬಂಗಾರಪ್ಪ