ಕೇಂದ್ರದಲ್ಲಿ ವಾಜಪೇಯಿ ಅವರು ಆರು ವರ್ಷ ಪ್ರಧಾನಿಯಾಗಿದ್ದರು, ಆಗ ಏಕೆ ಶ್ರೀರಾಮಮಂದಿರ ಕಟ್ಟಿಸಲಿಲ್ಲ, ಈಗ್ಯಾಕೆ ಶ್ರೀರಾಮನನ್ನು ನೆನಪು ಮಾಡಿಕೊಳ್ಳುತ್ತಿದ್ದೀರಿ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಎಲ್.ಕೆ.ಆಡ್ವಾಣಿ ಅವರು ಗೃಹಸಚಿವರಾಗಿದ್ದಾಗ ದೇಶದಲ್ಲಿ ಏನೆಲ್ಲ ಆಯ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬಡವರಿಗೆ ಎರಡು ಹೊತ್ತಿನ ಊಟ ಕೊಡುವ ಶಕ್ತಿ ಬಿಜೆಪಿಗಿಲ್ಲ. ಯಾವ ಕಾಲದಲ್ಲಿಯೂ ಸಾಮಾಜಿಕ ಸಮಾನತೆ ಬಗ್ಗೆ ಮಾತನಾಡದ ಅವರು ದೇಶ ಆಳಲು ಅರ್ಹರೆ ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿ ಬೇಡ ಎಂದು ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸುವ ಬಿಜೆಪಿ, ಇನ್ನೊಂದೆಡೆ ಜನರ ಬಳಿಗೆ ಹೋಗಿ ಮೀಸಲಾತಿ ಕಲ್ಪಿಸುತ್ತೇವೆ ಎನ್ನುತ್ತಾರೆ. ಇದು ಎರಡು ನಾಲಿಗೆಯಲ್ಲವೇ ?ಎಂದು ಪ್ರಶ್ನಿಸಿದರು. ಬಿಜೆಪಿಯವರು ಚುನಾವಣೆ ಬಂದಾಗ ಮಾತ್ರ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ನಾವು ಹಿಂದುಗಳಲ್ಲವೇ, ಬಿಜೆಪಿಯವರು ಮಾತ್ರ ಹಿಂದುಗಳೇ ಎಂದು ಕಿಡಿಕಾರಿದರು. |