ಕಳೆದ ವಿಧಾನ ಸಭಾ ಚುನಾವಣೆಗಳ ಬಳಿಕ ತನಗೇ ತಿಳಿಯದಂತೆ ಬಿಎಸ್ಪಿ ಪಕ್ಷದಿಂದ ಉಚ್ಚಾಟಿಸಿಕೊಂಡಿದ್ದ ರಾಜ್ಯದ ಹಿರಿಯ ರಾಜಕಾರಣಿ ಪಿ.ಜಿ.ಆರ್. ಸಿಂಧ್ಯಾ ಅವರು ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ.ಇತ್ತೀಚೆಗೆ ಬಹುಜನ ಸಮಾಜವಾದಿ ಪಕ್ಷ ಸೇರಿದ್ದ ಸಿಂಧ್ಯಾ ಅವರನ್ನು, ಕಳೆದ ಚುನಾವಣೆಗಳಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠೆ ಮಾಯಾವತಿ ಅವರು ಉಚ್ಚಾಟಿಸಿದ್ದ ಬಳಿಕ ಬಹುತೇಕ ಮೌನವಾಗಿದ್ದ ಸಿಂಧ್ಯಾ ಅವರು, ಇತ್ತೀಚೆಗೆ ಜಾತ್ಯತೀತ ಪಕ್ಷಕ್ಕೆ ಸೇರುವ ತನ್ನ ಇಚ್ಛೆಯನ್ನು ಬಹಿರಂಗ ಪಡಿಸಿದ್ದರು.ಸಿಂಧ್ಯಾ ಅವರು ಸೋಮವಾರದಿಂದ ಕಾಂಗ್ರೆಸ್ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಗುಲ್ಬಾರ್ಗದಲ್ಲಿ ತಿಳಿಸಿದ್ದಾರೆ.ಸಿಂಧ್ಯಾ ಅವರು ಬೀದರ್ ಗುಲ್ಬರ್ಗಾ ಮಾತ್ರವಲ್ಲದೆ, ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ಅಧ್ಯಕ್ಷರು ಹೇಳಿದ್ದಾರೆ. |