ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಧಿಕಾರ ಕೊಟ್ಟರೆ ಸಂತೋಷವಾಗುತ್ತೆ: ಸೋಮಣ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಧಿಕಾರ ಕೊಟ್ಟರೆ ಸಂತೋಷವಾಗುತ್ತೆ: ಸೋಮಣ್ಣ
ಅಧಿಕಾರ ಎನ್ನುವುದು ತಾನಾಗಿಯೇ ಹುಡುಕುತ್ತಾ ಬಂದಾಗ ಸುಮ್ಮನೆ ಕೂರಲು ನಾನು ಸನ್ಯಾಸಿಯಲ್ಲ. 28 ವರ್ಷಗಳಿಂದ ರಾಜಕೀಯದಲ್ಲಿ ಇದ್ದು, ನನ್ನದೇ ಆದ ವರ್ಚಸ್ಸು ಉಳಿಸಿಕೊಂಡು ಬಂದಿದ್ದೇನೆ. ನನ್ನನ್ನು ನಂಬಿದ ಕಾರ್ಯಕರ್ತರಿಗೆ ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿಂತ ನೀರಲ್ಲ. ಸದಾ ಹರಿಯುವ ನೀರು. ಉತ್ತಮ ಸಂಘಟಕನಾಗಿ, ಬೀದರ್‌ನಿಂದ ಚಾಮರಾಜನಗರದವರೆಗೆ ನನ್ನ ಪರಿಚಯವಿದೆ. ಬಿಜೆಪಿ ಹೈಕಮಾಂಡ್ ಯಾವ ಹುದ್ದೆ ನೀಡಿದರೂ ಪಕ್ಷದ ಶಿಸ್ತಿನ ಸಿಪಾಯಿಯಂತೆ ಸಮರ್ಥವಾಗಿ ನಿಭಾಯಿಸಿಸಲು ತಯಾರಿರುವುದಾಗಿ ತಿಳಿಸಿದರು.

ಬಿಜೆಪಿಯವರಿಗೆ ನೀವು ಹೊರಗಿನವನು ಎಂಬ ಭಾವನೆ ಇದೆಯಲ್ಲಾ ಎಂಬ ಪ್ರಶ್ನೆಗೆ, "ನಾನೂ ಸಹ ಆರ್ಎಸ್ಎಸ್ ಮೂಲದವನು. ಹಾಗಾಗಿ ಬಿಜೆಪಿಯವರಿಗೆ ನನ್ನ ಬಗ್ಗೆ ಬೇರೆ ಭಾವನೆಬರಲು ಸಾಧ್ಯವಿಲ್ಲ. ಯುವ ಕಾರ್ಯಕರ್ತರಿಗೆ ಹೊಸ ಹುರುಪು ತುಂಬಲು ಶಕ್ತನಾಗಿದ್ದೇನೆ" ಎಂದರು.

ಮಹದೇವಪ್ಪ ಹಾಗೂ ನಾನು ಸ್ನೇಹಿತರು. ರಾಜಕಾರಣದಲ್ಲಿ ನನಗಿಂತ ಅವರು ಹಿರಿಯ ರಾಜಕಾರಣಿ. ಅವರ ಬಗ್ಗೆ ಅಪಾರ ಗೌರವವಿದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕುಮಾರಸ್ವಾಮಿ ರೋಡ್ ಶೋ
ಕೋಮಘರ್ಷಣೆ: 10 ಮಂದಿ ಬಂಧನ
ಕಾಂಗ್ರೆಸ್ ಪರ ಸಿಂಧ್ಯಾರಿಂದ ಪ್ರಚಾರ
ನಟಸಾರ್ವಭೌಮನ ತೃತೀಯ ಪುಣ್ಯತಿಥಿ
ತಮಿಳ್ನಾಡು ಕಾಂಗ್ರೆಸ್ ವೀಕ್ಷಕರಾಗಿ ಶಿವಣ್ಣ
ಬಿಜೆಪಿಗೆ ಗುಜರಾತ್‌ನಿಂದ ಮದ್ಯ ಪೂರೈಕೆ