ಮಾತೆತ್ತಿದರೆ ಜೆಡಿಎಸ್ ಸತ್ತಿದೆ, ಅಂತ್ಯ ಸಂಸ್ಕಾರ ಮಾಡ್ತೇವೆ, ತಿಥಿ ಮಾಡ್ತೇವೆ ಎಂದು ಹೆದರಿಸುವ ಬಳ್ಳಾರಿ ಗಣಿಧಣಿಗಳನ್ನು ಕಂಡು ಭಯವಾಗಿದೆ. ಇಂತವರ ವಿರುದ್ಧ ಪಕ್ಷದ ಅಭ್ಯರ್ಥಿಗಳ ಪಾಡೇನು? ಈ ಹಿನ್ನೆಲೆಯಲ್ಲಿ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ತಮ್ಮ ಸಾಧನೆಗಳ ಜಪ ಸಾಕಾಗಿ ಮುಂದೇನು ಎಂದು ತೋಚದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಕ್ಷುಲಕ ಆರೋಪ ಮಾಡುವವರ ಬಗ್ಗೆ ನಾನೇನು ಪ್ರತಿಕ್ರಿಯಿಸಲಿ ಎಂದ ಮಾಜಿ ಪ್ರಧಾನಿ, ಬಳ್ಳಾರಿಯಲ್ಲಿ ನಿತ್ಯ ದೊರೆಯುತ್ತಿರುವ ಅಕ್ರಮ ಹಣದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ದೇಶದ ಖನಿಜ ಸಂಪತ್ತನ್ನು ಅವ್ಯಾಹತವಾಗಿ ಲೂಟಿ ಮಾಡುತ್ತಿರುವ ಗಣಿಧಣಿಗಳ ಹಣದ ಮದ ಇಂತಹ ದುರಹಂಕಾರದ ಮಾತುಗಳನ್ನಾಡಿಸುತ್ತಿದೆ. ಇದನ್ನೇ ಒಳ ಒಪ್ಪಂದ ಎನ್ನುವುದಾದರೆ ನಾನೇನು ಮಾಡಲು ಸಾಧ್ ಎಂದರು.
ಹಿಂದೆ ಮೌಲ್ಯಾಧಾರಿತ ರಾಜಕಾರಣ ಇತ್ತು. ಈಗ ಆ ಸ್ಥಾನವನ್ನು ಮೌಲ್ಯ ಅಕ್ರಮಿಸಿಕೊಂಡಿದೆ. ರಾಜಕೀಯ ಹಣ ಕಾಸಿನಿಂದ ಪ್ರಬಲವಾಗಿರುವ ವ್ಯಕ್ತಿಗೆ ಮಾತ್ರ ಸೂಕ್ತ ಎನ್ನುವ ವ್ಯವಸ್ಥೆಯಲ್ಲಿ ನಾವಿರುವುದರಿಂದ, ರಾಜ್ಯದ 28 ಕ್ಷೇತ್ರಗಳಿಗೂ ಪಕ್ಷದ ಅಭ್ಯರ್ಥಿಗಳನ್ನು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ ರಚಿಸಲು ಸಾಧ್ಯವಿಲ್ಲ. ಮತದಾರರು ತೃತೀಯ ರಂಗದ ಕಡೆಗೆ ಒಲವು ತೋರುತ್ತಿದ್ದಾರೆ ಎಂದರು.
|