ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದೇಶವನ್ನಾಳಿದ ಕಾಂಗ್ರೆಸ್ ಭಸ್ಮಾಸುರ ಪಕ್ಷ: ಶೃತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶವನ್ನಾಳಿದ ಕಾಂಗ್ರೆಸ್ ಭಸ್ಮಾಸುರ ಪಕ್ಷ: ಶೃತಿ
ಕಳೆದ ಅನೇಕ ವರ್ಷಗಳಿಂದ ದೇಶವನ್ನು ಆಳಿದ ಕಾಂಗ್ರೆಸ್ ಭಸ್ಮಾಸುರ ಪಕ್ಷವಾಗಿದೆ. ಅದರ ಕೈ ಚಿಹ್ನೆ ಜನರನ್ನು ಸುಟ್ಟು ಭಸ್ಮ ಮಾಡುತ್ತಿದೆ ಎಂದು ಚಿತ್ರನಟಿ, ಬಿಜೆಪಿ ನಾಯಕಿ ಶೃತಿ ಮಹೇಂದರ್ ಟೀಕಿಸಿದ್ದಾರೆ.

ಮಾತೃಸಂಗಮ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ. ಆದರೆ ಬಿಜೆಪಿ ಮಾತ್ರ ಜನರೊಂದಿಗೆ ನೇರ ಒಪ್ಪಂದ ಮಾಡಿಕೊಂಡಿದೆ ಎಂದರು.

ಮಹಿಳೆಯರು ಅಳುವ ಬದಲು ದೇಶ ಆಳಬೇಕು. ಉತ್ತಮ ಸರ್ಕಾರ ರಚನೆಯಲ್ಲಿ ಭಾಗಿಗಳಾಗಬೇಕು.ಮಹಿಳೆಯರ ಸಂರಕ್ಷಣೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ತಾನು ಸಿನಿಮಾದಲ್ಲಿ ನಿರ್ವಹಿಸುವ ಪಾತ್ರ ಕೇವಲ ಕಥೆ ಅಲ್ಲ. ಅದು ಎಲ್ಲರ ಬದುಕಿನ ಕಥೆ. ಮಹಿಳೆಯರು ಸ್ವಾವಲಂಬಿಗಳಾಗಬೇಕು. ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಇದಕ್ಕೆ ಬಿಜೆಪಿ ಅವಕಾಶ ನೀಡುತ್ತದೆ ಎಂದರು.

ಶಾಸಕ ಸಿ.ಟಿ. ರವಿ ಮಾತನಾಡಿ, ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟರಿಗೆ ತಾಲಿಬಾನ್ ಭೂತ ಹಿಡಿದಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಇದನ್ನು ಓಡಿಸಬೇಕಾಗಿದೆ. ನಾವಿಂದು ಕತ್ತಿ ಹಿಡಿದು ಯುದ್ಧ ಮಾಡಬೇಕಾಗಿಲ್ಲ. ಮತ ಹಾಕಿ ದುಷ್ಟರಿಗೆ ಬುದ್ದಿ ಕಲಿಸಬೇಕಾಗಿದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಂಗ್ ದುರ್ಬಲ ಪ್ರಧಾನಿಯಲ್ಲ: ಎಸ್.ಎಂ. ಕೃಷ್ಣ ಸ್ಪಷ್ಟೋಕ್ತಿ
ಪ್ರಚಾರಕ್ಕೆ ಸಿಎಂ ಆಹ್ವಾನಿಸಿಲ್ಲ: ವರ್ತೂರು
ದಾವಣಗೆರೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಅಂಗೀಕಾರ
ಖರ್ಗೆ ರಾಜೀನಾಮೆ ನನಗೆ ತಿಳಿದಿಲ್ಲ: ದೇಶಪಾಂಡೆ
ಬಳ್ಳಾರಿ ಗಣಿಧಣಿಗಳು ಹೆದರಿಸುತ್ತಿದ್ದಾರೆ: ಗೌಡ್ರು
ಮಕ್ಕಳ ದುರ್ಬಳಕೆ: ಅನಂತ್ ವಿರುದ್ಧ ಕ್ರಮಕ್ಕೆ ಆಗ್ರಹ