ಕಳೆದ ಅನೇಕ ವರ್ಷಗಳಿಂದ ದೇಶವನ್ನು ಆಳಿದ ಕಾಂಗ್ರೆಸ್ ಭಸ್ಮಾಸುರ ಪಕ್ಷವಾಗಿದೆ. ಅದರ ಕೈ ಚಿಹ್ನೆ ಜನರನ್ನು ಸುಟ್ಟು ಭಸ್ಮ ಮಾಡುತ್ತಿದೆ ಎಂದು ಚಿತ್ರನಟಿ, ಬಿಜೆಪಿ ನಾಯಕಿ ಶೃತಿ ಮಹೇಂದರ್ ಟೀಕಿಸಿದ್ದಾರೆ.
ಮಾತೃಸಂಗಮ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ. ಆದರೆ ಬಿಜೆಪಿ ಮಾತ್ರ ಜನರೊಂದಿಗೆ ನೇರ ಒಪ್ಪಂದ ಮಾಡಿಕೊಂಡಿದೆ ಎಂದರು.
ಮಹಿಳೆಯರು ಅಳುವ ಬದಲು ದೇಶ ಆಳಬೇಕು. ಉತ್ತಮ ಸರ್ಕಾರ ರಚನೆಯಲ್ಲಿ ಭಾಗಿಗಳಾಗಬೇಕು.ಮಹಿಳೆಯರ ಸಂರಕ್ಷಣೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ತಾನು ಸಿನಿಮಾದಲ್ಲಿ ನಿರ್ವಹಿಸುವ ಪಾತ್ರ ಕೇವಲ ಕಥೆ ಅಲ್ಲ. ಅದು ಎಲ್ಲರ ಬದುಕಿನ ಕಥೆ. ಮಹಿಳೆಯರು ಸ್ವಾವಲಂಬಿಗಳಾಗಬೇಕು. ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಇದಕ್ಕೆ ಬಿಜೆಪಿ ಅವಕಾಶ ನೀಡುತ್ತದೆ ಎಂದರು.
ಶಾಸಕ ಸಿ.ಟಿ. ರವಿ ಮಾತನಾಡಿ, ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟರಿಗೆ ತಾಲಿಬಾನ್ ಭೂತ ಹಿಡಿದಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಇದನ್ನು ಓಡಿಸಬೇಕಾಗಿದೆ. ನಾವಿಂದು ಕತ್ತಿ ಹಿಡಿದು ಯುದ್ಧ ಮಾಡಬೇಕಾಗಿಲ್ಲ. ಮತ ಹಾಕಿ ದುಷ್ಟರಿಗೆ ಬುದ್ದಿ ಕಲಿಸಬೇಕಾಗಿದೆ ಎಂದರು.
|