ರಾಜ್ಯದ ಕುರಿತು ಕೇಂದ್ರದ ಯುಪಿಎ ಸರ್ಕಾರ ಅನುಸರಿಸಿರುವ ತಾರತಮ್ಯ ನೀತಿಯ ಕುರಿತು ದೂರಿರುವ ಬಿಜೆಪಿಯು ಈ ಕುರಿತು 14 ಅಂಶಗಳ ಆರೋಪಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬಿಜೆಪಿ ಪಟ್ಟಿಮಾಡಿರುವ ಅಂಶಗಳು ಇಂತಿವೆ: * ಹೈದರಾಬಾದ್ , ಮುಂಬೈ, ಕೋಲ್ಕತಾ ಚೆನ್ನೈಗೆ ರಾಷ್ಟ್ರೀಯ ಭದ್ರತಾ ಪಡೆಯ(ಎನ್ಎಸ್ಜಿ) ಘಟಕಗಳನ್ನು ಮಂಜೂರು ಮಾಡಿದ್ದರೆ, ಬೆಂಗಳೂರಿಗೆ ಮಾಡಿಲ್ಲ.
* ಹೈದರಾಬಾದ್ ಕರ್ನಾಟಕ ಭಾಗವನ್ನು ಸಂವಿಧಾನದ 371ನೆ ವಿಧಿಯಡಿ ಸೇರಿಸಿಲ್ಲ. ಈ ಕುರಿತ ಮನವಿಯನ್ನೂ ಕೇಂದ್ರ ಪರಿಗಣಿಸಿಲ್ಲ.
* ಆಂಧ್ರ ಪ್ರದೇಶಕ್ಕೆ ಶೇ.32 ಹಾಗೂ ತಮಿಳ್ನಾಡಿಗೆ ಶೇ.34ರಷ್ಟು ವಿದ್ಯುತ್ ಪೂರೈಕೆ ಮಾಡಿದ್ದರೆ, ಕರ್ನಾಟಕಕ್ಕೆ ಕೊಟ್ಟದ್ದು ಕೇವಲ ಶೇ 17ರಷ್ಟು ಮಾತ್ರ.
* ಪ್ರಕೃತಿ ವಿಕೋಪ ನಿಧಿಯಲ್ಲಿ ಆಂಧ್ರಪ್ರದೇಶಕ್ಕೆ ರೂ.398.32 ಕೋಟಿ ತಮಿಳ್ನಾಡಿಗೆ 242 ಕೋಟಿ ನೀಡಲಾಗಿದ್ದರೆ, ರಾಜ್ಯಕ್ಕೆ ಧಕ್ಕಿದ್ದು ಬರಿಯ 132 ಕೋಟಿ ರೂಪಾಯಿ. * ರಾಜ್ಯಕ್ಕೆ ರಸಗೊಬ್ಬರ ಪೂರೈಸುವಲ್ಲಿಯೂ ಕೇಂದ್ರ ವಿಫಲವಾಗಿದೆ. ಇದರಿಂದಾಗಿ ರೈತರ ಆತ್ಮಹತ್ಯೆಗೆ ಕೇಂದ್ರ ಸರ್ಕಾರವೇ ಹೊಣೆ.
* ರಾಜ್ಯದ ರೈಲ್ವೆ ಯೋಜನೆಗಳಿಗೂ ಸರಿಯಾಗಿ ಹಣನೀಡಿಲ್. ಈ ಬಾರಿ ಕನಿಷ್ಠ 10 ಯೋಜನೆಗಳಿಗೆ ಮಂಜೂರಾತಿ ನೀಡುವಂತೆ ಕೋರಿದ್ದರೂ ಪರಿಗಣಿಸಿಲ್ಲ.
* ಬೀದರ್ನ ವಾಯುಪಚಿ ವಿಮಾನ ನಿಲ್ದಾಣವನ್ನು ನಾಗರಿಕ ವಿಮಾನ ಯಾನ ಸೇವೆ ಆರಂಭಿಸಲು ಇನ್ನೂ ಅನುಮತಿ ನೀಡಿಲ್ಲ.
* ವಿವಿಧ ಅಭಿವೃದ್ಧಿ ಯೋಜನೆಗಳ ಸಲುವಾಗಿ ಆಂಧ್ರಪ್ರದೇಶಕ್ಕೆ ರೂ. 24,954 ಕೋಟಿ ನೀಡಿದೆಯ ಆದರೆ, ರಾಜ್ಯಕ್ಕೆ ಬರಿಯ 6,426 ಕೋಟಿ ಮಾತ್ರ.
* ಕೃಷಿ ಸಾಲ ಮತ್ತು ಸಾಲಮನ್ನಾ ಯೋಜನೆಗಳಡಿಯೂ ತಾರತಮ್ಯ ಎಸಗಲಾಗಿದೆ. ಆಂಧ್ರ ಪ್ರದೇಶಕ್ಕೆ ರೂ. 2,444 ಕೋಟಿ ಅನುದಾನ ನೀಡಲಾಗಿದೆ. ಆದರೆ, ಕರ್ನಾಟಕಕ್ಕೆ ಕೊಟ್ಟದ್ದು ಕೇವಲ 607 ಕೋಟಿ.
* ನೀರಾವರಿ ಯೋಜನೆಗಳಿಗಾಗಿ ಆಂಧ್ರಕ್ಕೆ 1,959 ಕೋಟಿ, ಮಹಾರಾಷ್ಟ್ರಕ್ಕೆ 1,170 ಕೋಟಿ ನೀಡಿದ್ದರೆ ರಾಜ್ಯಕ್ಕೆ ಲಭಿಸಿದ್ದು 323 ಕೋಟಿ ಮಾತ್ರ
* ಕರ್ನಾಟಕ ಮತ್ತು ಆಂಧ್ರಗಳ ನಡುವೆ ಇರುವ ಅಂತಾರಾಜ್ಯ ಗಡಿಯನ್ನು ಜಂಟಿ ಭೂಮಾಪನ ಮಾಡಲು ಕೇಂದ್ರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ.
* ಕನ್ನಡಕ್ಕೆ ಶಾಸ್ತ್ರೀಯ ಭಾಷೆಸ್ಥಾನ ನೀಡಲು ಕೇಂದ್ರ ಒಪ್ಪಿದರೂ ಅದಕ್ಕೆ ಬೇಕಾದ ಸೌಲಭ್ಯಗಳು ಇನ್ನೂ ಲಭಿಸಿಲ್ಲ.
* ಬೆಂಗಳೂ ಮಹಾನಗರದ ಮೂಲಸೌಕರ್ಯ ಅಭಿವೃದ್ಧಿಗೆ 5000 ಕೋಟಿ ಪ್ಯಾಕೇಜ್ ಕೇಳಿದ್ದರೂ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಚೆನ್ನೈ, ಹೈದರಾಬಾದ್ ನಗರಗಳಿಗೆ ಹೆಚ್ಚಿನ ಹಣ ನೀಡಲಾಗಿದೆ.
|