ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪ್ರಧಾನಿ-ಅಡ್ವಾಣಿಗೆ ತೃತೀಯರಂಗದ ಭಯ: ಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ-ಅಡ್ವಾಣಿಗೆ ತೃತೀಯರಂಗದ ಭಯ: ಗೌಡ
ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿರುವ ಎಲ್.ಕೆ.ಅಡ್ವಾಣಿ ಅವರಿಬ್ಬರೂ ಪರಸ್ಪರ ವಾಕ್ಸಮರ ನಡೆಸುವ ಮೂಲಕ ಪ್ರಧಾನಿ ಹುದ್ದೆಯ ಗೌರವಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಇಬ್ಬರು ಇಷ್ಟು ಕೆಳ ಮಟ್ಟಕ್ಕೆ ಇಳಿದು ಪರಸ್ಪರ ಟೀಕೆಯಲ್ಲಿ ತೊಡಗುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.

ಎನ್‌ಡಿಎ ಮತ್ತು ಯುಪಿಎ ನಾಯಕರು ಪರಸ್ಪರ ಟೀಕೆ ಮಾಡುತ್ತಿರುವುದನ್ನು ನೋಡಿದರೆ ಅವರಿಗೆ ತೃತೀಯ ರಂಗದ ಬಗ್ಗೆ ಎಷ್ಟರ ಮಟ್ಟಿಗೆ ಭಯ, ಆತಂಕ ಸೃಷ್ಟಿಯಾಗಿದೆ ಎಂಬುದು ತಿಳಿಯುತ್ತದೆ ಎಂದರು.

ತೃತೀಯ ರಂಗ ದಿನೇದಿನೇ ಬಲಯುತವಾಗುತ್ತಿದೆ. ಈ ಮುಖಂಡರಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳನ್ನು ಹೊರತುಪಡಿಸಿ ಇನ್ನುಳಿದ ಪಕ್ಷಗಳ ಇರುವಿಕೆ ಎರಡೂ ಪಕ್ಷಗಳ ಮುಖಂಡರಿಗೆ ಬೇಕಾಗಿಲ್ಲ ಎಂದು ಅವರು ನುಡಿದರು.

ಬಳ್ಳಾರಿ ಹಾಗೂ ಶಿವಮೊಗ್ಗಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದನ್ನು ನೋಡಿದರೆ ಅಲ್ಲಿ ನೀತಿಯೇ ಇಲ್ಲ. ಇನ್ನು ಸಂಹಿತೆ ಕಾಪಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತದೆ ಎಂದು ವ್ಯಂಗ್ಯವಾಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುಪಿಎ ತಾರತಮ್ಯ: ಬಿಜೆಪಿಯಿಂದ 14 ಅಂಶಗಳ ಪಟ್ಟಿ
ಬಿಜೆಪಿಯಿಂದ ಸಮಾಜದಲ್ಲಿ ಅಶಾಂತಿ: ಜಿ. ಪರಮೇಶ್ವರ್
ಲೋಕಾಯುಕ್ತ ದುರುಪಯೋಗ ಯತ್ನ: ಹೆಗ್ಡೆ ಅಸಮಾಧಾನ
ಕತ್ತರಿಸುವವರು, ಚಚ್ಚುವವರನ್ನು ದೂರವಿಡಿ: ಸಾಹಿತಿಗಳು
ದೇಶವನ್ನಾಳಿದ ಕಾಂಗ್ರೆಸ್ ಭಸ್ಮಾಸುರ ಪಕ್ಷ: ಶೃತಿ
ಸಿಂಗ್ ದುರ್ಬಲ ಪ್ರಧಾನಿಯಲ್ಲ: ಎಸ್.ಎಂ. ಕೃಷ್ಣ ಸ್ಪಷ್ಟೋಕ್ತಿ