ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿಎಂ, ಗೃಹಸಚಿವರ ರಾಜೀನಾಮೆಗೆ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಎಂ, ಗೃಹಸಚಿವರ ರಾಜೀನಾಮೆಗೆ ಒತ್ತಾಯ
ಜಿಲ್ಲೆಯಲ್ಲಿ ಚುನಾವಣಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಆಡಳಿತ ಪಕ್ಷದ ಮೂಗಿನಡಿಯಲ್ಲಿಯೇ ಎಲ್ಲವೂ ನಡೆಯುತ್ತಿದೆ. ಅಕ್ರಮ, ಸ್ವೇಚ್ಚಾಚಾರ, ಅಕ್ರಮ ಮದ್ಯಪೂರೈಕೆ ಮಿತಿಮೀರಿದ್ದು, ಇದೆಲ್ಲದರ ನೈತಿಕ ಹೊಣೆಹೊತ್ತು ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹಸಚಿವರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಒತ್ತಾಯಿಸಿದ್ದಾರೆ.

ಜಿಲ್ಲೆಯ ಅವ್ಯವಸ್ಥೆ ಸರಿಪಡಿಸುವಂತೆ ಮತ್ತು ಇಲ್ಲಿನ ಡಿಸಿ ಮತ್ತು ಡಿವೈಎಸ್ಪಿ ಅವರನ್ನು ವರ್ಗಾವಣೆ ಮಾಡುವಂತೆ ಕೇಂದ್ರ ಚುನಾವಣಾಧಿಕಾರಿಗಳನ್ನು ಅವರು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ್ಥಹಳ್ಳಿ ಮತ್ತು ಉಳವಿಯಲ್ಲಿ ಅಕ್ರಮ ಮದ್ಯ ದೊರಕಿತ್ತು. ಇದು ಬಿಜೆಪಿಗೆ ಸೇರಿದ್ದೆಂದು ಡಿಸಿ ದೃಢಪಡಿಸಿದ್ದಾರೆ. ಇದರ ಹಿಂದೆ ಯಾರೇ ಇದ್ದರೂ ಅಂತಿಮವಾಗಿ ಮುಖ್ಯಮಂತ್ರಿ ಮತ್ತು ಗೃಹಸಚಿವರೇ ಇದೆಲ್ಲದರ ಹೊಣೆ ಹೊರಬೇಕಾಗಿದ್ದು ,ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಆಡಳಿತ ಯಂತ್ರ, ಆಡಳಿತಾರೂಢ ಸರ್ಕಾರದ ಅಣತಿಯಂತೆ ನಡೆದುಕೊಳ್ಳುತ್ತಿದೆ. ಈಗಿನ ಸ್ಥಿತಿಯನ್ನು ನೋಡಿದರೆ ಮುಂದಿನ ಹದಿನೈದು ದಿನಗಳು ಯಾವ ರೀತಿ ಇರುತ್ತದೆ ಎಂದು ಊಹಿಸಲೂ ಕಷ್ಟವಾಗುತ್ತದೆ. ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ ಎಂದವರು ದೂರಿದರು.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಧಾನಿ-ಅಡ್ವಾಣಿಗೆ ತೃತೀಯರಂಗದ ಭಯ: ಗೌಡ
ಯುಪಿಎ ತಾರತಮ್ಯ: ಬಿಜೆಪಿಯಿಂದ 14 ಅಂಶಗಳ ಪಟ್ಟಿ
ಬಿಜೆಪಿಯಿಂದ ಸಮಾಜದಲ್ಲಿ ಅಶಾಂತಿ: ಜಿ. ಪರಮೇಶ್ವರ್
ಲೋಕಾಯುಕ್ತ ದುರುಪಯೋಗ ಯತ್ನ: ಹೆಗ್ಡೆ ಅಸಮಾಧಾನ
ಕತ್ತರಿಸುವವರು, ಚಚ್ಚುವವರನ್ನು ದೂರವಿಡಿ: ಸಾಹಿತಿಗಳು
ದೇಶವನ್ನಾಳಿದ ಕಾಂಗ್ರೆಸ್ ಭಸ್ಮಾಸುರ ಪಕ್ಷ: ಶೃತಿ