" ಕಳೆದ 30 ವರ್ಷಗಳಿಂದ ಸಂಸತ್ ಸದಸ್ಯೆಯಾಗಿರುವ ನಾನು ಕೇಂದ್ರದಲ್ಲಿ ಸಚಿವೆಯಾಗಿಯೂ ಕೆಲಸ ಮಾಡಿದ್ದೇನೆ. ಜನಸೇವೆ ಮಾಡುವುದನ್ನು ನಾನು ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ" ಎಂದು ಕಾರವಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆಯ್ಕೆಯಾದ ಮೇಲೆ ಲೋಕಸಭೆಯಲ್ಲಿ ನಿದ್ದೆ ಮಾಡಿಲ್ಲ, ಬಾಯಿಮುಚ್ಚಿ ಕುಳಿತುಕೊಳ್ಳಲೂ ಇಲ್ಲ. ಇದ್ಯಾವುದರ ಪರಿವೇ ಇಲ್ಲದೇ ಸಂಸತ್ನಲ್ಲಿ ನಿದ್ದೆ ಮಾಡಿದವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದವರು ಹೇಳಿದರು.ನನಗೆ ಸಾರ್ವಜನಿಕರ ಹಣವನ್ನು ಸ್ವಾರ್ಥಕ್ಕೆ ಬಳಸುವ ಅಗತ್ಯ ತನಗಿಲ್ಲ ಎಂದ ಅವರು, ಸಂಸದೆಯಾಗಿದ್ದಾಗ ಜಿಲ್ಲೆಯಲ್ಲಿ ಉಪಯುಕ್ತ ಕಾಮಗಾರಿ ಮಾಡಿದ್ದೇನೆ. ಹಲವಾರು ಸಂಪರ್ಕ ರಸ್ತೆಗಳನ್ನು ಮಾಡಿಸಿದ್ದೇನೆ. ಅಭಿವೃದ್ದಿ ಕಾಮಗಾರಿಗಳಿಗೆ, ಕುಡಿಯುವ ನೀರಿಗೆ ಶೌಚಾಲಯಕ್ಕೆ ಆದ್ಯತೆ ನೀಡಿದ್ದೇನೆ ಎಂದರು.ಇಂದು ಪ್ರತಿ ಬಸ್ ನಿಲ್ದಾಣಗಳಲ್ಲೂ ಸುಲಭ ಶೌಚಾಲಯಗಳ ಸೌಲಭ್ಯವನ್ನು ಮಹಿಳೆಯರು ಪಡೆಯುತ್ತಿದ್ದಾರೆ ಎಂದು ಆಳ್ವ ನುಡಿದರು. |