ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ಯಕ್ಕೆ ಎಂಪಿ, ಗುಜರಾತ್‌ನಿಂದ ಅಕ್ರಮ ಮದ್ಯ: ಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಕ್ಕೆ ಎಂಪಿ, ಗುಜರಾತ್‌ನಿಂದ ಅಕ್ರಮ ಮದ್ಯ: ಡಿಕೆ
NRB
ಸೋಲಿನ ಭೀತಿ ಎದುರಿಸುತ್ತಿರುವ ಬೆಜೆಪಿಯು ತೀವ್ರ ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ ಎಂದು ದೂರಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷವು ತನ್ನ ಮಂತ್ರಿಗಳು ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಬೆದರಿಕೆಯೊಡ್ಡುತ್ತಿದೆ ಎಂದು ಹೇಳಿದ್ದಾರೆ. "ಪಕ್ಷಕ್ಕಾಗಿ ದುಡಿಯದಿದ್ದರೆ ನಿಮ್ಮ ಸ್ಥಾನ ಕಳೆದುಕೊಳ್ಳಲಿದ್ದೀರಿ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ ಅವರು ಹತಾಶ ಸ್ಥಿತಿಗೆ ತಲುಪಿರುವ ಕಾರಣ ಅಧಿಕಾರ ದುರುಪಯೋಗ ನಡೆಸಲು ಮುಖ್ಯಮಂತ್ರಿಗಳೇ ಅನುಮತಿ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಈ ಅಧ್ಯಕ್ಷರು, ಸಚಿವರುಗಳ ಚಲನವಲನಗಳ ಮೇಲೆ ನಿಗಾ ಇಡಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಶಿವಕುಮಾರ್ ಹೇಳಿದ್ದಾರೆ. ಇದೇವೇಳೆ ಕಾಂಗ್ರೆಸ್ ಪಕ್ಷವು ಚುನಾವಣಾ ನೀತಿ ಸಂಹಿತೆಗೆ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿ ಅಧಿಕಾರವಿರುವ ಗುಜಾರಾತ್ ಹಾಗೂ ಮಧ್ಯಪ್ರದೇಶಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಸರಬರಾಜಾಗುತ್ತಿದೆ ಎಂದು ಅವರು ಆಪಾದಿಸಿದ್ದಾರೆ. ಅಲ್ಲದೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಾಣ್ ಅವರು ಕಳ್ಳಸಾಗಾಣೆ ಮೂಲಕ ಮದ್ಯ ಪೂರೈಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಅವರು ಈ ಸಂದರ್ಭದಲ್ಲಿ ಮಾಡಿದ್ದಾರೆ. ಅಲ್ಲದೆ ಈ ಕುರಿತು ಸಿಓಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಾವೂದ್ ಬಂಟ ಮಲಬಾರಿ ಬೆಂಗಳೂರಿಗೆ
ನಕಲಿ ಛಾಪಾಕಾಗದ: ರೋಶನ್ ಬೇಗ್ ದೋಷ ಮುಕ್ತಿ
ಪಕ್ಷ ಬಿಡಲ್ಲ ಜೆಡಿಎಸ್ ಸೇರಲ್ಲ: ಪ್ರಕಾಶ್
ಆಡ್ವಾಣಿ ಆರೆಸ್ಸೆಸ್ ಜೀತದಾಳು: ಸೋನಿಯಾ ಟೀಕೆ
ನಾನು ಬಿಜೆಪಿಯಿಂದ ಕಲಿಯಬೇಕಿಲ್ಲ: ಮಾರ್ಗರೆಟ್
ಗಣಿಲಂಚ ಸಾಬೀತಾದರೆ ಗಲ್ಲಿಗೇರಿಸಿ: ಕುಮಾರಸ್ವಾಮಿ