ಆಡ್ವಾಣಿ ಆರೆಸ್ಸೆಸ್ ಗುಲಾಮ ಎಂಬುದಾಗಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹೇಳಿರುವುದಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಕಾಂಗ್ರೆಸ್ನಲ್ಲಿ ಈಗಲೂ ಗುಲಾಮಗಿರಿ ಮುಂದುವರಿದಿದೆ ಎಂದು ಟೀಕಿಸಿದ್ದಾರೆ.
ಬುಧವಾರ ಬೀದರ್ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿರುವ ಸೋನಿಯಾಗಾಂಧಿ, ಮನಮೋಹನ್ ಸಿಂಗ್ ಅವರನ್ನು ಪದೇಪದೇ ದುರ್ಬಲ ಪ್ರಧಾನಿ, ಅಧಿಕಾರವಿಲ್ಲದ ಪ್ರಧಾನಿ ಎಂದು ಜರೆಯುತ್ತಿರುವ ಆಡ್ವಾಣಿ ಆರೆಸ್ಸೆಸ್ ಗುಲಾಮ ಎಂದು ಹೇಳಿದ್ದರು.
ಕಾಂಗ್ರೆಸ್ನಲ್ಲಿ ಹಿಂದಿನಿಂದಲೂ ಗುಲಾಮಗಿರಿ ನಡೆಯುತ್ತಾ ಬಂದಿದ್ದು, ಕಾಂಗ್ರೆಸಿಗರು ಸೋನಿಯಾರ ಜೀತದಾಳುಗಳು ಎಂದು ಅನಂತ್ ಕುಮಾರ್ ಹೇಳಿದರು.
ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ನಮ್ಮ ದೇಶ ಸ್ವತಂತ್ರವಾಯಿತು. ಆದರೆ ಗುಲಾಮಗಿರಿಯನ್ನು ಪಾಲಿಸುತ್ತಲೇ ಬಂದಿರುವ ಸೋನಿಯಾ ಗಾಂಧಿ ಅವರಿಗೆ ಈ ದೇಶದ ಜನತೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಅನಂತ್ ಭವಿಷ್ಯ ನುಡಿದರು. |