ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸಿಗರು ಸೋನಿಯಾರ ಜೀತದಾಳುಗಳು: ಅನಂತ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸಿಗರು ಸೋನಿಯಾರ ಜೀತದಾಳುಗಳು: ಅನಂತ್
ಆಡ್ವಾಣಿ ಆರೆಸ್ಸೆಸ್ ಗುಲಾಮ ಎಂಬುದಾಗಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹೇಳಿರುವುದಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಕಾಂಗ್ರೆಸ್‌ನಲ್ಲಿ ಈಗಲೂ ಗುಲಾಮಗಿರಿ ಮುಂದುವರಿದಿದೆ ಎಂದು ಟೀಕಿಸಿದ್ದಾರೆ.

ಬುಧವಾರ ಬೀದರ್‌ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿರುವ ಸೋನಿಯಾಗಾಂಧಿ, ಮನಮೋಹನ್ ಸಿಂಗ್ ಅವರನ್ನು ಪದೇಪದೇ ದುರ್ಬಲ ಪ್ರಧಾನಿ, ಅಧಿಕಾರವಿಲ್ಲದ ಪ್ರಧಾನಿ ಎಂದು ಜರೆಯುತ್ತಿರುವ ಆಡ್ವಾಣಿ ಆರೆಸ್ಸೆಸ್ ಗುಲಾಮ ಎಂದು ಹೇಳಿದ್ದರು.

ಕಾಂಗ್ರೆಸ್‌ನಲ್ಲಿ ಹಿಂದಿನಿಂದಲೂ ಗುಲಾಮಗಿರಿ ನಡೆಯುತ್ತಾ ಬಂದಿದ್ದು, ಕಾಂಗ್ರೆಸಿಗರು ಸೋನಿಯಾರ ಜೀತದಾಳುಗಳು ಎಂದು ಅನಂತ್ ಕುಮಾರ್ ಹೇಳಿದರು.

ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ನಮ್ಮ ದೇಶ ಸ್ವತಂತ್ರವಾಯಿತು. ಆದರೆ ಗುಲಾಮಗಿರಿಯನ್ನು ಪಾಲಿಸುತ್ತಲೇ ಬಂದಿರುವ ಸೋನಿಯಾ ಗಾಂಧಿ ಅವರಿಗೆ ಈ ದೇಶದ ಜನತೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಅನಂತ್ ಭವಿಷ್ಯ ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯಕ್ಕೆ ಎಂಪಿ, ಗುಜರಾತ್‌ನಿಂದ ಅಕ್ರಮ ಮದ್ಯ: ಡಿಕೆ
ದಾವೂದ್ ಬಂಟ ಮಲಬಾರಿ ಬೆಂಗಳೂರಿಗೆ
ನಕಲಿ ಛಾಪಾಕಾಗದ: ರೋಶನ್ ಬೇಗ್ ದೋಷ ಮುಕ್ತಿ
ಪಕ್ಷ ಬಿಡಲ್ಲ ಜೆಡಿಎಸ್ ಸೇರಲ್ಲ: ಪ್ರಕಾಶ್
ಆಡ್ವಾಣಿ ಆರೆಸ್ಸೆಸ್ ಜೀತದಾಳು: ಸೋನಿಯಾ ಟೀಕೆ
ನಾನು ಬಿಜೆಪಿಯಿಂದ ಕಲಿಯಬೇಕಿಲ್ಲ: ಮಾರ್ಗರೆಟ್