ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತಾಕತ್ತಿದ್ದರೆ ಸಿಎಂಮೊಕದ್ದಮೆ ಹೂಡಲಿ : ಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಕತ್ತಿದ್ದರೆ ಸಿಎಂಮೊಕದ್ದಮೆ ಹೂಡಲಿ : ಕುಮಾರ್
"ರಾಜ್ಯದ ವಿವಿ ಕುಲಪತಿಗಳ ಜತೆಯಲ್ಲಿ ಯಡಿಯೂರಪ್ಪ ಗೋಲ್ಡನ್ ಚಾರಿಯೆಟ್ ಟ್ರೈನ್‌ನಲ್ಲಿ ಹಣ ಒಯ್ದು ಹಂಚಿರುವ ಕುರಿತು ತನ್ನ ಬಳಿ ಮಾಹಿತಿ ಇದೆ. ಯಡಿಯೂರಪ್ಪರಿಗೆ ತಾಕತ್ತಿದ್ದರೆ ನನ್ನ ಮೇಲೆ ಮೊಕದ್ದಮೆ ಹೂಡಲಿ" ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೊಮ್ಮೆ ತಾಕತ್ತಿನ ಸವಾಲು ಹಾಕಿದ್ದಾರೆ.

ಇಲ್ಲಿ ನಡೆದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಯುಡಿಯೂರಪ್ಪರನ್ನು ತರಾಟೆಗೆ ತೆಗೆದುಕೊಂಡರು.

"ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ತಾನೇ ಎಂದು ಯಡಿಯೂರಪ್ಪ ಪ್ರಚಾರ ಮಾಡುತ್ತಿದ್ದಾರೆ. ನಾನೇನು ಅವರ ಬಳಿ ಅರ್ಜಿ ಹಿಡಿದು ಹೋಗಿರಲಿಲ್ಲ. ಮಾಜಿ ಸಚಿವ ಅನಂತ್ ಕುಮಾರ್ ಬಳಿ ಐದು ಕೋಟಿ ರೂಪಾಯಿ ಸಾಲ ಮಾಡಿದ್ದೇನೆ. ಈ ಸಾಲವನ್ನು ಅವರ ಮುಖಕ್ಕೆಸೆದು ಜೆಡಿಎಸ್ ಸೇರುತ್ತೇನೆ ಎಂದು ದುಂಬಾಲು ಬಿದ್ದವರು ಅವರೇ" ಎಂದು ಕುಮಾರಸ್ವಾಮಿ ದೂರಿದ್ದಾರೆ.

ಇದೇ ವೇಳೆ ಮತದಾರರು ರಾಜ್ಯದಿಂದ 16 ಜೆಡಿಎಸ್ ಅಭ್ಯರ್ಥಿಗಳನ್ನು ಲೋಕಸಭೆಗೆ ಕಳುಹಿಸಿದರೆ, ಬಳ್ಳಾರಿಯ ಗಣಿಧಣಿಗಳನ್ನು ಕರ್ನಾಟಕದಿಂದ ಖಾಲಿ ಮಾಡಿಸುವುದಾಗಿ ಅವರು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಾವಣಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೊರಕ್ಕೆ
ಕಾಂಗ್ರೆಸಿಗರು ಸೋನಿಯಾರ ಜೀತದಾಳುಗಳು: ಅನಂತ್
ರಾಜ್ಯಕ್ಕೆ ಎಂಪಿ, ಗುಜರಾತ್‌ನಿಂದ ಅಕ್ರಮ ಮದ್ಯ: ಡಿಕೆ
ದಾವೂದ್ ಬಂಟ ಮಲಬಾರಿ ಬೆಂಗಳೂರಿಗೆ
ನಕಲಿ ಛಾಪಾಕಾಗದ: ರೋಶನ್ ಬೇಗ್ ದೋಷ ಮುಕ್ತಿ
ಪಕ್ಷ ಬಿಡಲ್ಲ ಜೆಡಿಎಸ್ ಸೇರಲ್ಲ: ಪ್ರಕಾಶ್