ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮತ್ತೊಂದು ರಾಗ ತೆಗೆದಿದ್ದಾರೆ.
ರಾಜೀನಾಮೆ ವಿಷಯವನ್ನು ಸ್ವತಃ ಖರ್ಗೆ ಪ್ರಕಟಿಸಿದ್ದರೂ, ಅದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದ ದೇಶಪಾಂಡೆ, ಈಗ ಖರ್ಗೆ ರಾಜೀನಾಮೆ ನೀಡಿಯೇ ಇಲ್ಲ ಎಂದಿದ್ದಾರೆ.
"ನಿಯಮ ಪ್ರಕಾರ ಖರ್ಗೆ ರಾಜೀನಾಮೆ ಪತ್ರವನ್ನು ನನಗೆ ಸಲ್ಲಿಸಬೇಕು. ನಾನು ಅದನ್ನು ಹೈಕಮಾಂಡ್ಗೆ ಕಳಿಸಬೇಕು. ಅಲ್ಲಿ ಅಂಗೀಕೃತವಾದ ಬಳಿಕ ಶಾಸಕಾಂಗ ಪಕ್ಷದ ಸಭೆ ನಡೆದು ಹೊಸ ನಾಯಕನ ಆಯ್ಕೆಯಾಗಬೇಕು. ಪಿಸಿಸಿ ಅಧ್ಯಕ್ಷನಾಗಿ ನಾನೇ ಅದನ್ನು ಸ್ಪೀಕರ್ ಗಮನಕ್ಕೆ ತರಬೇಕು. ಇದುವರೆಗೂ ಖರ್ಗೆ ರಾಜೀನಾಮೆ ಪತ್ರ ನನ್ನ ಕೈ ಸೇರಿಲ್ಲ" ಎಂಬುದು ಅವರ ವಾದ.
ಸಿದ್ದರಾಮಯ್ಯಗೆ ಉನ್ನತ ಸ್ಥಾನ ನೀಡುವುದು ಹೈಕಮಾಂಡ್ಗೆ ಬಿಟ್ಟ ವಿಷಯ. ಚುನಾವಣೆ ಬಳಿಕ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ನುಡಿದರು. |