ಭಟ್ಕಳ ನಿವಾಸಿ, ನ್ಯಾಯವಾದಿ ನೌಶಾದ್ ಕಾಸೀಮ್ಜಿ ಹತ್ಯೆಯ ಹಿಂದೆ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಗುಂಪಿನ ಕೈವಾಡ ಇರುವುದಾಗಿ ಗೃಹಸಚಿವ ವಿ.ಎಸ್.ಆಚಾರ್ಯ ಶಂಕೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೌಶಾದ್ ಹತ್ಯೆಯ ತನಿಖೆಗಾಗಿ ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದರು. ಭಯೋತ್ಪಾದನೆ ತಡೆ ಹಾಗೂ ಬೆಲೆ ಏರಿಕೆಯನ್ನು ಹತೋಟಿಯಲ್ಲಿಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಈ ಸಂದರ್ಭದಲ್ಲಿ ದೂರಿದರು.
ಬಂಧಿತ ರಶೀದ್ ಮಲಬಾರಿ ಪರ ವಕೀಲರಾಗಿದ್ದ ಭಟ್ಕಳ ನಿವಾಸಿ ನೌಶಾದ್ ಅವರನ್ನು ಮಂಗಳೂರಿನಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಈ ಹತ್ಯೆಯನ್ನು ತಾವೇ ಮಾಡಿರುವುದಾಗಿ ಭೂಗತಲೋಕದ ರವಿ ಪೂಜಾರಿ ಹೊಣೆ ಹೊತ್ತುಕೊಂಡಿದ್ದ. ನೌಶಾದ್ ಹತ್ಯೆಯನ್ನು ಖಂಡಿಸಿ ಮಂಗಳೂರು, ಉಡುಪಿ ವಕೀಲರ ಸಂಘಟನೆ ತೀವ್ರ ಪ್ರತಿಭಟನೆಯನ್ನು ನಡೆಸಿತ್ತು. |