ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನೌಶಾದ್ ಹತ್ಯೆಯ ಹಿಂದೆ ದಾವೂದ್ ಕೈವಾಡ: ಆಚಾರ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೌಶಾದ್ ಹತ್ಯೆಯ ಹಿಂದೆ ದಾವೂದ್ ಕೈವಾಡ: ಆಚಾರ್ಯ
ಭಟ್ಕಳ ನಿವಾಸಿ, ನ್ಯಾಯವಾದಿ ನೌಶಾದ್ ಕಾಸೀಮ್‌ಜಿ ಹತ್ಯೆಯ ಹಿಂದೆ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಗುಂಪಿನ ಕೈವಾಡ ಇರುವುದಾಗಿ ಗೃಹಸಚಿವ ವಿ.ಎಸ್.ಆಚಾರ್ಯ ಶಂಕೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೌಶಾದ್ ಹತ್ಯೆಯ ತನಿಖೆಗಾಗಿ ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದರು. ಭಯೋತ್ಪಾದನೆ ತಡೆ ಹಾಗೂ ಬೆಲೆ ಏರಿಕೆಯನ್ನು ಹತೋಟಿಯಲ್ಲಿಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಈ ಸಂದರ್ಭದಲ್ಲಿ ದೂರಿದರು.

ಬಂಧಿತ ರಶೀದ್ ಮಲಬಾರಿ ಪರ ವಕೀಲರಾಗಿದ್ದ ಭಟ್ಕಳ ನಿವಾಸಿ ನೌಶಾದ್ ಅವರನ್ನು ಮಂಗಳೂರಿನಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಈ ಹತ್ಯೆಯನ್ನು ತಾವೇ ಮಾಡಿರುವುದಾಗಿ ಭೂಗತಲೋಕದ ರವಿ ಪೂಜಾರಿ ಹೊಣೆ ಹೊತ್ತುಕೊಂಡಿದ್ದ. ನೌಶಾದ್ ಹತ್ಯೆಯನ್ನು ಖಂಡಿಸಿ ಮಂಗಳೂರು, ಉಡುಪಿ ವಕೀಲರ ಸಂಘಟನೆ ತೀವ್ರ ಪ್ರತಿಭಟನೆಯನ್ನು ನಡೆಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಧಾನಿ ಸಿಂಗ್ ಸೋನಿಯಾ ಗುಲಾಮ: ಬಿಜೆಪಿ
ರಾಜ್ಯದಲ್ಲಿ ಬಿಜೆಪಿ ನೆಲೆಯೂರಲು ಗೌಡರೇ ಕಾರಣ: ಸಿದ್ದು
ಹಾಸನ, ಬೀದರ್, ಗುಲ್ಬರ್ಗ ಸೂಕ್ಷ್ಮವೆಂದು ಘೋಷಿಸಿ: ಸಿಎಂ
ಬಿಜೆಪಿ ಬಡವರಿಂದ ಬಹುದೂರ ಸಾಗಿದೆ: ರಾಹುಲ್ ಗಾಂಧಿ
ಛಾಪಕೂಪ: ಸಂಗ್ರಾಮ್‌ಗೆ 3ವರ್ಷಗಳ ಕಠಿಣ ಶಿಕ್ಷೆ
ಬಿಜೆಪಿ ಒಂದೂ ಭರವಸೆಯನ್ನು ಈಡೇರಿಸಿಲ್ಲ: ದೇವೇಗೌಡ