ನಮ್ಮ ಸರ್ಕಾರ ಅಧಿಕಾರದ ಗದ್ದುಗೆ ಏರಿದಲ್ಲಿ ಬಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳನ್ನು ನಿಷೇಧಿಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭರವಸೆ ನೀಡಿದ್ದಾರೆ.ಶುಕ್ರವಾರ ಗಂಗೇನಹಳ್ಳಿಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಆರ್.ಸುರೇಂದ್ರ ಬಾಬು ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಆಶಾಂತಿ ಹುಟ್ಟುಹಾಕುತ್ತಿರುವ ಈ ಸಂಘಟನೆಗಳಿಗೆ ಸಂಪೂರ್ಣ ನಿಷೇಧ ಹೇರಲಾಗುವುದು ಎಂಬ ಅಂಶವನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿರುವುದಾಗಿಯೂ ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.ಈ ಚುನಾವಣೆಯಲ್ಲಿ ಯುಪಿಎ ಕಳೆಗುಂದುತ್ತಿದ್ದರೆ, ತೃತೀಯ ರಂಗ ದಿನೆ ದಿನೇ ಹೆಚ್ಚು ಜನಪ್ರಿಯವಾಗುತ್ತಿದೆ. ಯುಪಿಎ ಜೊತೆ ಈಗ ಯಾರೂ ಉಳಿದಿಲ್ಲ. ಪಕ್ಷ ಮರಳು ಕರಗಿದಂತೆ ಕರಗುತ್ತಿದೆ ಎಂದು ಹೇಳಿದರು. |