ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವ ಅಡ್ವಾಣಿ ಸಂಘ ಪರಿವಾರದವರು. ಅವರು ಅಧಿಕಾರಕ್ಕೆ ಬಂದರೆ ವರುಣ್ ಗಾಂಧಿ ನುಡಿದಂತೆ ದೇಶದಲ್ಲಿ ಯಾರ ಕೈಗಳೂ ಉಳಿಯಲಾರವು ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹೇಳಿದರು.ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಯಾವುದೇ ಚರ್ಚ್, ಮಸೀದಿಗಳು ಉಳಿಯಲಾರವು. ಜತೆಗೆ ದೇವಸ್ಥಾನಗಳೂ ಉಳಿಯುವುದಿಲ್ಲ ಎಂದರು. ದೇಶವನ್ನು ಯಾರ ಕೈಯಲ್ಲಿ ಕೊಡಬೇಕು ಎಂದು ಚಿಂತಿಸಿ, ಕೋಮು ದಳ್ಳುರಿ ಹರಡುವ ಪಕ್ಷಕ್ಕೆ, ವಿಧ್ವಂಸಕ ಕೃತ್ಯ ಹರಡುವವರಿಗೆ ಮತ ಹಾಕಬೇಡಿ ಎಂದೂ ಮನವಿ ಮಾಡಿದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮದಿದ್ದರೂ ಜಾತ್ಯತೀತ ಶಕ್ತಿಗಳು ಒಂದಾಗಲಿವೆ. ಭಾಷೆ, ಪಂಗಡ, ನಂಬಿಕೆಗಳಲ್ಲಿ ಏಕತೆ ಸಾಧಿಸುವವರು ಹಸ್ತಕ್ಕೆ ಮತ ನೀಡಿ ಎಂದು ಕರೆ ನೀಡಿದರು. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 71 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು. |