ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲೋಕಸಭೆ ಪ್ರಥಮ ಹಂತ: ನಾಳೆ ಪ್ರಚಾರ ಕಾರ್ಯಕ್ಕೆ ತೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆ ಪ್ರಥಮ ಹಂತ: ನಾಳೆ ಪ್ರಚಾರ ಕಾರ್ಯಕ್ಕೆ ತೆರೆ
ಮೊಯ್ಲಿ, ಖರ್ಗೆ, ಧರಂಸಿಂಗ್, ಆಳ್ವ, ಅನಂತಕುಮಾರ್ ಭವಿಷ್ಯ ನಿರ್ಧಾರ...
ಪ್ರಥಮ ಹಂತದ ಚುನಾವಣೆ ನಡೆಯಲಿರುವ ರಾಜ್ಯದ 17ಲೋಕಸಭೆ ಕ್ಷೇತ್ರಗಳಲ್ಲಿನ ಪ್ರಚಾರ ಕಾರ್ಯಕ್ಕೆ ಮಂಗಳವಾರ ತೆರೆ ಬೀಳಲಿದ್ದು, ಚುನಾವಣಾ ಆಯೋಗ ಅಂತಿಮ ಸಿದ್ದತೆಯಲ್ಲಿ ತೊಡಗಿದೆ.

ಪ್ರಥಮ ಹಂತದಲ್ಲಿ ಸುಮಾರು 2.58ಕೋಟಿ ಮತದಾರರು 271 ಅಭ್ಯರ್ಥಿಗಳ 'ಹಣೆಬರಹ' ನಿರ್ಧರಿಸಲಿದ್ದಾರೆ. ಇದಕ್ಕಾಗಿ 28, 500ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸಿದ್ದಪಡಿಸಲಾಗಿದೆ.

17ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಸಂಜೆ 5ಗಂಟೆಗೆ ಪ್ರಚಾರ ಕಾರ್ಯ ಕೊನೆಗೊಳ್ಳಲಿದೆ. ನಂತರ ಯಾವುದೇ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಹೊಂದಿಲ್ಲದ ರಾಜಕೀಯ ಪಕ್ಷಗಳ ಮುಖಂಡರು ಕೂಡ ಮಂಗಳವಾರ ಸಂಜೆ 5ಗಂಟೆಗೆ ತಮ್ಮ ಕ್ಷೇತ್ರದಿಂದ ನಿರ್ಗಮಿಸಲು ಆಯೋಗ ಸೂಚನೆ ನೀಡಿದೆ.

ಕ್ಷೇತ್ರಗಳ ಪುನರ್‌ ವಿಂಗಡಣೆ ಬಳಿಕ ನಡೆಯುತ್ತಿರುವ ಮೊದಲ ಲೋಕಸಭಾ ಚುನಾವಣೆ ಇದಾಗಿದೆ. ಅಲ್ಲದೇ ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಇರುವುದು ಕೂಡ ಈ ಬಾರಿ ಚುನಾವಣಾ ವಿಶೇಷವಾಗಿದೆ.

ಬುಧವಾರ ಸಂಜೆ ಮತದಾನ ಕೇಂದ್ರದ ಸಿಬ್ಬಂದಿ ಜಿಲ್ಲಾ ಕೇಂದ್ರಗಳಿಂದ ಮತಯಂತ್ರಗಳನ್ನು ಮತಗಟ್ಟೆಗಳಿಗೆ ಕೊಂಡೊಯ್ಯುತ್ತಾರೆ. ಗುರುವಾರ(ಏ.23) ಬೆಳಿಗೆಗ್ 7ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ.

ಪ್ರಥಮ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳು: ಚಿಕ್ಕೋಡಿ, ಬೆಳಗಾವಿ, ವಿಜಾಪುರ (ಪ.ಜಾ), ಗುಲ್ಬರ್ಗಾ(ಪ.ಜಾ), ರಾಯಚೂರು (ಪ.ಪಂ), ಬೀದರ್, ಕೊಪ್ಪಳ, ಬಳ್ಳಾರಿ (ಪ.ಜಾ), ಉತ್ತರ ಕನ್ನಡ, ಚಿತ್ರದುರ್ಗ (ಪ.ಜಾ), ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ (ಪ.ಜಾ) ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯಾದ್ಯಂತ ವರುಣನ ಆರ್ಭಟಕ್ಕೆ 7 ಬಲಿ
ಮದ್ಯದಂಗಡಿಗಳಿಂದ ಬಿಜೆಪಿ ಹಫ್ತಾ ವಸೂಲಿ: ಕುಮಾರಸ್ವಾಮಿ
ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ: ಶೋಭಾ ಕರಂದ್ಲಾಜೆ
ಇನ್ನಾವ ದೇಶದ ನಿರ್ಮಾಣ ಮಾಡಿದ್ದೀರಿ?
ರಾಹುಲ್ ಮನಬಂದಂತೆ ಮಾತನಾಡಬಾರದು: ಸಿಎಂ
ಧರಂಸಿಂಗ್‌ಗೆ ಸೇರಿದ ಹತ್ತು ಲಕ್ಷ ನಗದು ವಶ