ಹುಬ್ಬಳ್ಳಿ ಕಲಘಟಗಿಯ ಜುಂಜಲ್ಬೈಲ್ ಸಮೀಪ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಅದಿರು ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಸುರತ್ಕಲ್ನ ಆರು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸುರತ್ಕಲ್ನಿಂದ ಕಾರಿನಲ್ಲಿ ಮುಂಬೈಗೆ ತೆರಳುತ್ತಿದ್ದ ಸಂದರ್ಭದಲ್ಲಿ ಜುಂಜಲ್ಬೈಲ್ ಸಮೀಪ ವೇಗವಾಗಿ ಬಂದ ಅದಿರು ಲಾರಿ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರು ಸುರತ್ಕಲ್ ನಿವಾಸಿಗಳಾಗಿದ್ದು, ದಂಪತಿಗಳಾದ ಮೈಕೆಲ್ ಫ್ರಾನ್ಸಿಸ್, ಅನಿತಾ ಮೈಕೆಲ್, ಮೈಕೆಲ್ ಸಹೋದರರಾದ ಥಾಮಸ್, ಕ್ಲಿಂಟನ್, ಮೈಕೆಲ್ ಮಕ್ಕಳಾದ ಸ್ವೀಟಿ (12ವ) ಹಾಗೂ 2ರ ಹರೆಯದ ಶಾನ್ ಎಂದು ಗುರುತಿಸಲಾಗಿದೆ.
ಕಾರಿನಲ್ಲಿ 2.5ಲಕ್ಷ ರೂ.ನಗದು, ಚಿನ್ನಾಭರಣ ಇದ್ದಿರುವುದಾಗಿ ಅಧಿಕಾರಿಗಳು ವಿವರಿಸಿದ್ದು, ಅದಿರು ಲಾರಿ ಚಾಲಕ ಪರಾರಿಯಾಗಿದ್ದು, ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. |